Advertisement

ದಾಂಪತ್ಯ ಬಿರುಕು ಸುದ್ದಿಯಿಂದ ‌ನೋವಾಗಿದೆ : ನಟ ನಾಗಚೈತನ್ಯ

03:25 PM Sep 24, 2021 | Team Udayavani |

ಸ್ಟಾರ್‌ ದಂಪತಿಗಳಾದ ನಾಗ ಚೈತನ್ಯ ಮತ್ತು ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳಿಗೆ ಸಂಬಂಧಿಸಿ ಇದೇ ಮೊದಲ ಬಾರಿಗೆ ನಟ ನಾಗಚೈತನ್ಯ ಮೌನ ಮುರಿದಿದ್ದಾರೆ.

Advertisement

ತಮ್ಮ ‘ಲವ್ ಸ್ಟೋರಿ’ ಸಿನಿಮಾ ಪ್ರಮೋಷನ್ ವೇಳೆ ಮಾಧ್ಯಮಗಳ ಎದುರು ಮಾತನಾಡಿರುವ ನಾಗಚೈತನ್ಯ, “ನಾನು ನನ್ನ ವೈಯಕ್ತಿಕ ಮತ್ತು ವೃತ್ತಿ ಪರ ಬದುಕನ್ನು ಯಾವತ್ತೂ ಪ್ರತ್ಯೇಕವಾಗಿಡಲು ಬಯಸುತ್ತೇನೆ. ನನ್ನ ವೈಯಕ್ತಿಕ ಬದುಕಿನ ಬಗ್ಗೆ ಈ ರೀತಿಯ ಸುದ್ದಿಗಳು ಹರಿದಾಡಿದ್ದರಿಂದ ನನಗೆ ನೋವಾಗಿದೆ ಎಂದಿದ್ದಾರೆ.

ಟಿಆರ್‌ಪಿಗಾಗಿ ಇಂಥ ಸುದ್ದಿ ಹರಿಬಿಡಲಾಗುತ್ತದೆ. ಕೊನೆಗೊಂದು ದಿನ ಮರೆಯಾಗುತ್ತದೆ ಎಂದು ನಂಬಿದ್ದೇನೆ’ ಎಂದಿದ್ದಾರೆ ನಾಗಚೈತನ್ಯ.

ಮೊದಲಿನಿಂದಲೂ ನನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರ ಎದುರು ತೆರೆದಿಡಲು ನಾನು ಬಯಸಿಲ್ಲ. ಈಗಲೂ ಅಷ್ಟೇ ನನ್ನ ಪರ್ಸನಲ್ ಲೈಫ್ ಪರ್ಸನಲ್ ಆಗಿಯೆ ಇರಿಸಲು ಬಯಸುತ್ತೇನೆ ಎಂದಿದ್ದಾರೆ.

ಇನ್ನು ನಾಗಚೈತನ್ಯ ಹಾಗೂ ಸಮಂತಾ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎನ್ನುವ ವದಂತಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಇದೀಗ ಸತಿ-ಪತಿ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next