Advertisement

ಕಾರವಾರ-ಬೆಂಗಳೂರು ರೈಲನ್ನು ನಿಲ್ಲಿಸಿದ ಇಲಿ! ಪ್ರಯಾಣಿಕರಲ್ಲಿ ಆತಂಕ

12:17 AM Nov 16, 2022 | Team Udayavani |

ಬೈಂದೂರು: ಕಾರವಾರದಿಂದ ಬೆಂಗಳೂರಿಗೆ ತೆರಳುವ ರೈಲಿನಲ್ಲಿ ನಡುರಾತ್ರಿಯಲ್ಲಿ ಸೈರನ್‌ ಮೊಳಗಿ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಹಾಸನ ಜಂಕ್ಷನ್‌ ಬಳಿ ಸಂಭವಿಸಿದೆ.

Advertisement

ಬೆಂಗಳೂರಿಗೆ ತೆರಳುವ ರೈಲು ರಾತ್ರಿ ಒಂದು ಗಂಟೆಗೆ ಹಾಸನದ ಬಳಿ ಸಾಗುತ್ತಿದ್ದಾಗ ಬಿ1 ಬೋಗಿಯಲ್ಲಿ ಬೆಂಕಿ ಎಚ್ಚರಿಕೆಯ ಸೈರನ್‌ ಮೊಳಗ ತೊಡಗಿತು. ಅಪಾಯದ ಸೂಚನೆ ಘೋಷಣೆ ಆದ ಕಾರಣ ನಿದ್ರೆಯಲ್ಲಿದ್ದ ಪ್ರಯಾಣಿಕರು ಒಮ್ಮೆಲೇ ಆತಂಕದಿಂದ ಬಾಗಿಲ ಬಳಿ ಜಮಾಯಿಸಿದರು.

ತಾಂತ್ರಿಕ ಸಿಬಂದಿ ಪರಿಶೀಲಿಸಿದಾಗ ವಿದ್ಯುತ್‌ ಬೋರ್ಡ್‌ ಒಳಗಡೆ ಇಲಿ ನುಸುಳಿ ಅವಾಂತರ ಸೃಷ್ಟಿಸಿರುವುದು ಗೊತ್ತಾಯಿತು. ಹಾಸನದಲ್ಲಿ ರೈಲನ್ನು ನಿಲ್ಲಿಸಿ ದುರಸ್ತಿ ಮಾಡಲಾಯಿತು. ತಾಂತ್ರಿಕ ಸಿಬಂದಿ ಇಲಿಯನ್ನು ಹೊರತೆಗೆದ ಬಳಿಕ ಪ್ರಯಾಣಿಕರಿಗೆ ಹೋದ ಜೀವ ಬಂದಂತಾಯಿತು. ಒಟ್ಟಾರೆ ಇಲಿಯೊಂದರ ಅವಾಂತರ ಪ್ರಯಾಣಿಕರಲ್ಲಿ ಜೀವಭಯ ಮೂಡಿಸಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next