Advertisement

ಸಿಇಒ ಆಗಮನಕ್ಕೆ ಧರಣಿ ನಿರತ ಸದಸ್ಯರ ಒತ್ತಾಯ

05:16 PM Sep 14, 2022 | Team Udayavani |

ಆಳಂದ: ತಾಲೂಕಿನ ತಡಕಲ್‌, ರುದ್ರವಾಡಿ ಮತ್ತು ತಡೋಳಾ ಗ್ರಾಪಂಗಳಲ್ಲಿನ ಅವ್ಯವಹಾರ ಸರಿಡಿಸುವಂತೆ ಸೇರಿ ಇನ್ನಿತರ ಪ್ರಮುಖ ಬೇಡಿಕೆಗೆ ಮುಂದಿಟ್ಟುಕೊಂಡು ಪಟ್ಟಣದ ತಾಪಂ ಕಚೇರಿ ಎದುರು ಪ್ರತಿಪಕ್ಷ ಬೆಂಬಲಿತ ಗ್ರಾಪಂ ಸದಸ್ಯರು ಕೈಗೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 7ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಸ್ಥಳಕ್ಕೆ ಜಿಪಂ ಸಿಇಒ ಭೇಟಿ ನೀಡಿ ಬೇಡಿಕೆ ಈಡೇರಿಕೆಗೆ ಕ್ರಮ ಜರುಗಿಸಬೇಕು ಎಂದು ಗ್ರಾಪಂ ಸದಸ್ಯ ಹಾಗೂ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಬೆ, ವಿಶ್ವನಾಥ ಪವಾಡಶೆಟ್ಟಿ, ಶರಣಪ್ಪ ಜಮಾದಾರ, ಸದಸ್ಯೆ ಮಹಾನಂದ ಕೆ. ತುಕಾಣೆ, ಪಾರ್ವತಿಬಾಯಿ ಥಂಬೆ, ರುದ್ರವಾಡಿ ಚಂದ್ರಕಾಂತ ಖೋಬ್ರೆ, ತಡೋಳಾ ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ ನೇತೃತ್ವದಲ್ಲಿ ಆರಂಭಿಸಿದ ಧರಣಿ ಮುಂದುವರಿದಿದೆ.

ಪುರಸಭೆ ಕಾಂಗ್ರೆಸ್‌ ಸದಸ್ಯ ಶಿವುಪುತ್ರ ನಡಗೇರಿ, ದೋಂಡಿಬಾ ಸಾಳುಂಕೆ, ನ್ಯಾಯವಾದಿ ಸಂಜಯ ನಾಯಕ, ತೋಟಗಾರಿಕೆ ಬೆಳೆಗಾರ ಸಂಘದ ಬಾಬುರಾವ್‌ ಗೊಬ್ಬೂರೆ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ಮುನ್ನೊಹಳ್ಳಿ ವಿಎಸ್‌ಎಸ್‌ ಅಧ್ಯಕ್ಷ ಶಿವಶರಣಪ್ಪ ಎಸ್‌. ಬುಜುರ್ಕೆ, ದೌಲಪ್ಪ ಮಸರೆ, ಸಿದ್ಧು ವೇದಶೆಟ್ಟಿ, ಗುರುಶಾಂತ ಎಸ್‌. ಕಡಕೊಳ, ಚಂದ್ರಕಾಂತ ಗೊಬ್ಬೂರ, ಶರಣಪ್ಪ ಜಮಾದಾರ ಮತ್ತಿತರರು ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next