Advertisement

ಬಲಿದಾನ ದಿನಾಚರಣೆ: ಪಂಜಿನ ಮೆರವಣಿಗೆ

08:33 PM Mar 25, 2021 | Team Udayavani |

ಲಕ್ಷ್ಮೇಶ್ವರ: ಭಗತ್‌ಸಿಂಗ್‌, ಸುಖದೇವ ಮತ್ತು ರಾಜ್‌ಗುರು ಅವರ ದೇಶಪ್ರೇಮ, ತ್ಯಾಗ ತಲತಲಾಂತರದವರೆಗೂ ದೇಶದ ಜನತೆಗೆ ಸ್ಫೂರ್ತಿಯಾಗಿವೆ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನವೀನ ಹಿರೇಮಠ ಹೇಳಿದರು.

Advertisement

ಮಂಗಳವಾರ ಸಂಜೆ ಬಲಿದಾನ ದಿನ ಅಂಗವಾಗಿ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಶಿಗ್ಲಿ ನಾಕಾವರೆಗೆ ಕೈಗೊಂಡ ಪಂಜಿನ ಮೆರವಣಿಗೆ ಬಳಿಕ ಅವರು ಮಾತನಾಡಿದರು.

ಪಕ್ಷದ ಮುಖಂಡರಾದ ಚಂಬಣ್ಣ ಬಾಳಿಕಾಯಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ನಗರ ಘಟಕ ಅಧ್ಯಕ್ಷ ದುಂಡೇಶ ಕೊಟಗಿ, ಬಸವರಾಜ ಚಕ್ರಸಾಲಿ, ಸೋಮೇಶ ಉಪನಾಳ, ವಿಜಯ ಹತ್ತಿಕಾಳ, ಮಾರುತಿ ಸತ್ಯಮ್ಮನವರ, ನಿಂಬಣ್ಣ ಮಡಿವಾಳರ, ಶಿವಯೋಗಿ ಅಂಕಲಕೋಟಿ, ಲಕ್ಷ್ಮಣ  ಲಮಾಣಿ, ವಿಜಯ ಕುಂಬಾರ, ಗಿರೀಶ ಚೌರಡ್ಡಿ, ಚಂದ್ರು ಮಾಗಡಿ, ಅರುಣ ಪಾಟೀಲ, ಪ್ರವೀಣ ಬೋಮಲೆ, ರಾಮಣ್ಣ ರಿತ್ತಿ, ರುದ್ರಪ್ಪ ಉಮಚಗಿ ಸೇರಿದಂತೆ ಭಗತ್‌ಸಿಂಗ್‌ ಯುವ ಸಮಿತಿ, ನಗರ ಘಟಕ, ಯುವ ಮೋರ್ಚಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next