Advertisement

ಪೊಲೀಸರು ಒತ್ತಡಕ್ಕೆ ಮಣಿಯಬಾರದು

11:09 AM Feb 22, 2018 | Team Udayavani |

ಬೆಂಗಳೂರು: ಪೊಲೀಸ್‌ ಅಧಿಕಾರಿಗಳು ಯಾವುದೇ ರೀತಿಯಲ್ಲೂ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸಬಾರದು
ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಗರುಡಾಚಾರ್‌ ಅವರು ಸಲಹೆ ನೀಡಿದ್ದಾರೆ.

Advertisement

ಮಣಿಪಾಲ್‌ ಸೆಂಟರ್‌ನಲ್ಲಿ ಇರುವ “ಉದಯವಾಣಿ’ ಕಚೇರಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಪೊಲೀಸ್‌ ಅಧಿಕಾರಿಗಳು ಭಾರತೀಯ ದಂಡ ಸಂಹಿತೆ, ಸಿಆರ್‌ಪಿಸಿ, ಪೊಲೀಸ್‌ ಕಾಯ್ದೆ, ಪೊಲೀಸ್‌ ಮ್ಯಾನ್ಯುವಲ್‌, ಹೈಕೋರ್ಟ್‌,
ಸುಪ್ರೀಂ ಕೋರ್ಟ್‌ನ ಪ್ರಮುಖ ಆದೇಶಗಳನ್ನು ಓದಿಕೊಂಡಿರಬೇಕು. ಕಾನೂನಿನ ಅರಿವಿದ್ದಾಗ ಯಾರ ಒತ್ತಡಕ್ಕೂ ಮಣಿಯುವ ಅಗತ್ಯ ವಿರುವುದಿಲ್ಲ ಎಂದು ಹೇಳಿದರು. 

ಡಿಮೋಷನ್‌ಗೆ ಸೂಕ್ತ ಕಾರಣ: ಹೆಚ್ಚೆಂದರೆ ವರ್ಗಾವಣೆ, ಡಿಮೋಷನ್‌ ಮಾಡಿಸಬಹುದು. ಇದಕ್ಕೂ ಕಾರಣ ಕೊಡಲೇಬೇಕು ಇದನ್ನರಿತು ಸೇವೆ ಸಲ್ಲಿಸಬೇಕು ಎಂದರು.

ಭಾರತ ನಂ.1: ಕಷ್ಟ ಹೇಳಿ ಬರುವವರನ್ನು ಗೌರವರಿಂದ ನೋಡುವ ಮನೋಭಾವ ಬಂದಾಗ ಭಾರತ ಪ್ರಪಂಚದಲ್ಲೇ ನಂ.1 ಆಗಲಿದೆ ಎಂದರು. ನಿವೃತ್ತ ಡಿಸಿಪಿ ರಮೇಶ್‌ ಬಾಬು ಉಪಸ್ಥಿತರಿದ್ದರು. ಅಪರಾಧಿಗಳಿಗೆ ಪೊಲೀಸ್‌ ವ್ಯವಸ್ಥೆ,
ಕಾನೂನಿನ ಹಿನ್ನೆಲೆ, ನ್ಯಾಯಾಲಯ ಹಾಗೂ ಶಿಕ್ಷೆಯ ಬಗ್ಗೆ ಅರಿವಿರುವುದಿಲ್ಲ. ಆದರೆ, ಪೊಲೀಸ್‌ ಅಧಿಕಾರಿಗಳಿಗೆ ಎಲ್ಲಾ
ರೀತಿಯ ಕಟ್ಟುಪಾಡುಗಳು ಇರುತ್ತದೆ. ಪರಿಸ್ಥಿತಿ ನಿರ್ವಹಣೆ, ಸೂಕ್ಷ್ಮಾತಿ ಸೂಕ್ಷ್ಮ ಪ್ರಕರಣಗಳನ್ನು ಹೇಗೆ ಭೇದಿಸುತ್ತೇವೆ
ಎನ್ನುವುದು ಮುಖ್ಯ. 
ಗರುಡಾಚಾರ್‌, ನಿವೃತ್ತ ಐಪಿಎಸ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next