Advertisement

Stray Dog Attack; ಬೀದಿ ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದ ಸಿಂಧನೂರು ಜನತೆ..!

01:46 PM Jan 07, 2024 | Team Udayavani |

ಸಿಂಧನೂರು: ಮಾರುಕಟ್ಟೆಗೆ ಹೋದ ಸಂದರ್ಭದಲ್ಲಿ ಸಿನೀಮಿಯಾ ರೀತಿಯಲ್ಲಿ ಬೀದಿ ನಾಯಿ ಶನಿವಾರ ರಾತ್ರಿ ಬೆನ್ನು ಬಿದ್ದು‌ ಕಚ್ಚಿರುವ ರೀತಿ‌ ಜನರನ್ನು ಭಯಭೀತಗೊಳಿಸಿದೆ.

Advertisement

ಸಂಜೆ ಆರು ಗಂಟೆ ನಂತರ ಗಾರ್ಮೆಂಟ್ಸ್ ಗೆ ಹೋದ ಕುಟುಂಬದವರು ಹೊರಬಂದಾಗ ಬೀದಿ ನಾಯಿ ನೇರ ದಾಳಿ ನಡೆಸಿ ಕಾಲಿಗೆ ಕಚ್ಚಿದೆ. ಸಂಬಂಧಿ ಮಹಿಳೆಯೊಬ್ಬರು ಸೇರಿ ನೆರೆದವರು ಬಿಡಿಸಲು ಹೋದಾಗಲು‌ ನಾಯಿ ಬಿಟ್ಟಿಲ್ಲ.

ಎರಡು ದಿನದ ಹಿಂದೆ ಅಕ್ಕಮಹಾದೇವಿ ಆಸ್ಪತ್ರೆಗೆ ಪೊಲೀಸ್ ಕಾನ್ ಸ್ಟೇಬಲ್ ಪತ್ನಿ ಪುತ್ರನನ್ನು ಆರೋಗ್ಯ ಪರೀಕ್ಷೆಗೆ ಕರೆದೊಯ್ದಿದ್ದರು. ಆಗಲೂ ಪುತ್ರನಿಗೆ ಬೆನ್ನು ಬಿದ್ದ ಕಚ್ಚಿದ ನಾಯಿ ಬಿಡಿಸಲು ಹೋದ ಪೊಲೀಸ್ ಪೇದೆ ಪತ್ನಿಯೂ ಕೂಡ ನಾಯಿ ಕಡಿತಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ದಿಢೀರ್ ಶುರುವಾಗಿರುವಾಗಿರುವ ಬೀದಿ ನಾಯಿಗಳ ದಾಳಿ, ಪೊಲೀಸ್ ಕುಟುಂಬವನ್ನು ಬಿಡದೇ ಆಕ್ರಮಣ ಮಾಡುತ್ತಿರುವುದು, ತಾಲೂಕಿನಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next