Advertisement

Guarantee scheme: ಗ್ಯಾರಂಟಿ ಯೋಜನೆಯನ್ನು ಹಾಡಿ ಹೊಗಳಿದ ವೃದ್ಧೆ

10:36 PM Mar 07, 2024 | Team Udayavani |

ಬಾಗಲಕೋಟೆ: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳನ್ನು ವೃದ್ಧೆಯೊಬ್ಬರು ತನ್ನ ಸ್ವರಚಿತ ಕವನದ ಮೂಲಕ ಹೊಗಳಿ ಗಮನ ಸೆಳೆದರು.

Advertisement

ನವನಗರದ ಯೂನಿಟ್‌-2ರಲ್ಲಿ ಗುರುವಾರ ಜರಗಿದ ಗ್ಯಾರಂಟಿ ಸಮಾವೇಶದಲ್ಲಿ ಶಿರೂರಿನ ಬಾಲ್ಯ ವಿವಾಹ ವಿರುದ್ಧ ಹೋರಾಟ ನಡೆಸಿದ, ಕನ್ನಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಗುರಮ್ಮ ಸಂಗಿನಮಠ ಅವರು, ಸತ್ಯಶೀಲ ಸಿದ್ದರಾಮಯ್ಯ, ನಮ್ಮ ಮುಖ್ಯ ಸಚಿವರು ಎಂಬ ಹಾಡಿನೊಂದಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಹಾಡಿ ಹೊಗಳಿದರು.

ಬಳಿಕ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿಯೂ ಆಗಿರುವ ವಿಧಾನಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಅವರು ವೃದ್ಧೆಗೆ ನೆನಪಿನ ಕಾಣಿಗೆ ನೀಡಿ ಗೌರವಿಸಿ ವೃದ್ಧೆಯ ಕಾಲಿಗೆ ಬಿದ್ದರು. ಇದನ್ನು ನೋಡಿದ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಕೂಡ ಸಂಗಿನಮಠ ಅವರ ಕಾಲಿಗೆ ಬಿದ್ದು “ಚೆನ್ನಾಗಿರು ತಾಯಿ’ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next