Advertisement

ತರಾತುರಿಯಲ್ಲಿ EVM ಯಂತ್ರ ಬಿಟ್ಟು ಹೋದ ಅಧಿಕಾರಿಗಳು

11:27 PM May 11, 2023 | Team Udayavani |

ಚಿಕ್ಕಮಗಳೂರು: ಚುನಾವಣ ಪ್ರಕ್ರಿಯೆ ಮುಗಿದ ಅನಂತರ ನಗರದ ಮತಗಟ್ಟೆಯೊಂದರಲ್ಲಿ ಮತ ಸಂಗ್ರಹಗೊಂಡಿದ್ದ ಇವಿಎಂ ಯಂತ್ರವನ್ನು ಅಧಿಕಾರಿಗಳು ತರಾತುರಿಯಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ. ನಗರದ ಸ್ವತಂತ್ರ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 168 ಮತ್ತು 169 ಮತಗಟ್ಟೆಯ ಪೈಕಿ 169ನೇ ಬೂತ್‌ನ ಇವಿಎಂ ಯಂತ್ರ ಹಾಗೂ ವಿವಿಪ್ಯಾಟ್‌ ಅನ್ನು ಚುನಾವಣಾಧಿ ಕಾರಿಗಳು ಮರೆತು ಬೂತ್‌ನಲ್ಲೇ ಬಿಟ್ಟು ಹೋಗಿದ್ದರು. ಅ ಧಿಕಾರಿಗಳು ತೆರಳಿದ ಅನಂತರ ಮತಗಟ್ಟೆಯಿಂದ ತೆರಳಲು ಅನುವಾಗಿದ್ದ ಪಕ್ಷಗಳ ಏಜೆಂಟರ ಕಣ್ಣಿಗೆ ಅಧಿಕಾರಿಗಳು ಮರೆತು ಹೋಗಿದ್ದ 700 ಮತ ಸಂಗ್ರಹಗೊಂಡಿದ್ದ ಇವಿಎಂ ಮತಪೆಟ್ಟಿಗೆ ಮತ್ತು ವಿವಿ ಪ್ಯಾಟ್‌ ಕಂಡಿದೆ. ಕೂಡಲೇ ಅ ಧಿಕಾರಿಗಳಿಗೆ ಕರೆ ಮಾಡಲಾಗಿದ್ದು, ತತ್‌ಕ್ಷಣ ಅವರು ಬಂದು ಮತಯಂತ್ರವನ್ನು ತೆಗೆದುಕೊಂಡು ಹೋದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next