Advertisement

ಅಧಿಕಾರಿಗಳು ಮೇಲಿಂದ ಬಂದವರೇನು: ರಾಯರಡ್ಡಿ

06:35 AM Mar 18, 2018 | Team Udayavani |

ಕೊಪ್ಪಳ: ಐಪಿಎಸ್‌ ಅಧಿಕಾರಿಗಳೇನು ಸರ್ಕಾರಕ್ಕಿಂತ ದೊಡ್ಡವರಾ? ಅವರೇನು ಮೇಲಿಂದ ಬಂದವರಾ? ಮಾಧ್ಯಮಗಳೇ ಅವರನ್ನು ಹೀರೋ ಮಾಡುತ್ತಿವೆ..-ಹೀಗಂದವರು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಯಾವುದೇ ಪೊಲೀಸ್‌ ಅಧಿಕಾರಿಯನ್ನು ತಿಂಗಳಲ್ಲ, 9 ದಿನಕ್ಕೇ ವರ್ಗ ಮಾಡಿದರೂ ಅವರು ವರ್ಗಾವಣೆಯಾದ ಸ್ಥಳಕ್ಕೆ ತೆರಳಬೇಕು. ಸರ್ಕಾರ ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಅವಶ್ಯವಿರುವ ಕಡೆ ಅವರನ್ನು ವರ್ಗಾವಣೆ ಮಾಡಿರುತ್ತದೆ. ಸರ್ಕಾರಕ್ಕಿಂತ ಅವರೇನು ದೊಡ್ಡವರಲ್ಲ. ವರ್ಗಾವಣೆ ಪ್ರಶ್ನಿಸಿ ಬೇಕಿದ್ದರೆ ಸಿಎಟಿ ಮೊರೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ರಾಜ್ಯದಲ್ಲಿ ಈ ಬಾರಿ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯಲ್ಲ. ಜಾತಿ ಕಾರ್ಡ್‌ ವಕೌìಟ್‌ ಆಗಲ್ಲ. ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತದೆ ಎಂದು ಎಲ್ಲರೂ ಸುಮ್ಮನೆ ಮಾತನಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಂತೂ ಈ ಬಾರಿ ಜಾತಿ ಲೆಕ್ಕಾಚಾರ ನಡೆಯಲ್ಲ. ಯಾವ ವ್ಯಕ್ತಿಯೂ ಜಾತಿ ಹಾಗೂ ಹಣ ಕೇಳಲ್ಲ. ಸುಮ್ಮನೆ ನಮ್ಮಂತಹ ರಾಜಕಾರಣಿಗಳು ಜನರಿಗೆ ಹಣ, ಹೆಂಡ ಕೊಟ್ಟು ಅವರನ್ನು ನಾವೇ ಕೆಡಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next