Advertisement
ಆರಂಭದಲ್ಲಿ ದ್ವಿಪಥವಾಗಿದ್ದ ಹೆದ್ದಾರಿ ಚತುಷ್ಪಥಕ್ಕೆ ಬದಲಾಗಿ ದಶಕಗಳೇ ಕಳೆದರೂ ಬೀದಿದೀಪಗಳನ್ನು ಅಳವಡಿಸದ ಕಾರಣ ರಾತ್ರಿ ವೇಳೆ ಕತ್ತಲಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಈಗಲೂ ಇದೆ. ಇದರಿಂದ ರಾತ್ರಿ ವೇಳೆ ಅಪಘಾತ, ಅವಘಡಗಳಿಗೂ ಸಾಮಾನ್ಯವಾಗಿದೆ. ಹೆದ್ದಾರಿ ಇಲಾಖೆಗೆ ಈ ಕುರಿತು ಸಾರ್ವಜನಿಕರು, ಸಂಘ ಸಂಸ್ಥೆಗಳು ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.
Related Articles
ಇನ್ನೊಂದು 10-15 ದಿನದಲ್ಲಿ ಕಂಬವೂ ಅಳವಡಿಸುವ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ಲೈಟ್ ಉರಿಯುವುದು ಮಾತ್ರ ಸದ್ಯ ಅನುಮಾನವಾಗಿದೆ. ಕಾರಣ, ಮಂಗಳೂರು ನಗರ ವ್ಯಾಪ್ತಿಗೆ ಎಲ್ಇಡಿ ದೀಪಗಳನ್ನು ಅಳವಡಿಸಲು ಸ್ಮಾರ್ಟ್ ಸಿಟಿಯಿಂದ ಟೆಂಡರ್ ಆಗಿದೆ. ಪರಿಣಾಮವಾಗಿ ಮಹಾನಗರ ಪಾಲಿಕೆಗೆ ದೀಪಗಳನ್ನು ಅಳವಡಿಸಲು ಅವಕಾಶವಿಲ್ಲ. ಈ ಕಾಮಗಾರಿ ಟೆಂಡರ್ನಲ್ಲಿಯೂ ದೀಪ ಅಳವಡಿಸುವ ಕುರಿತು ಉಲ್ಲೇಖವಿಲ್ಲ. ಇನ್ನು ಸ್ಮಾರ್ಟ್ಸಿಟಿಯಿಂದ ಟೆಂಡರ್ ಪಡೆದಿರುವ ಏಜೆನ್ಸಿ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ ದೀಪ ಯಾವಾಗ ಉರಿಯಲಿದೆ ಎಂದು ಕಾದು ನೋಡಬೇಕಿದೆ.
Advertisement
ಬಹುಬೇಡಿಕೆಯ ಕಾಮಗಾರಿಪಡೀಲ್ ಭಾಗದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಹೆದ್ದಾರಿ ಮಧ್ಯದಲ್ಲಿ ಲೈಟ್ ಅಳವಡಿಸುವ ಕೆಲಸ ಆರಂಭವಾಗಿದೆ. ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆದು ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ಶೀಘ್ರದಲ್ಲಿ ಹೆದ್ದಾರಿಗೆ ಬೆಳಕು ಸಿಗಲಿದೆ.
-ಜಯಾನಂದ ಅಂಚನ್, ಮೇಯರ್ *ಭರತ್ ಶೆಟ್ಟಿಗಾರ್