Advertisement

ಕ್ಯಾಮೆರಾ ಅಳವಡಿಸಿದ ಬಳಿಕ ನಿಗೂಢ ಕಲ್ಲೇಟು ಬಂದ್‌!

11:08 PM Sep 16, 2019 | Lakshmi GovindaRaju |

ಗುಳೇದಗುಡ್ಡ: ಕಳೆದ ಕೆಲ ದಿನಗಳಿಂದ ಇಂಜಿನವಾರಿ ಶಾಲೆಯಲ್ಲಿ ಆತಂಕ ಸೃಷ್ಟಿಸಿದ್ದ “ನಿಗೂಢ ಕಲ್ಲೇಟು’ ಸಿಸಿ ಕ್ಯಾಮೆರಾ ಅಳವಡಿಸಿದ ಬಳಿಕ ಬಂದ್‌ ಆಗಿದೆ. ಅಧಿಕಾರಿಗಳು, ಪೊಲೀಸರು ಬಂದು ನಿಂತರೂ ಅವರ ಎದುರೇ ನಿಗೂಢವಾಗಿ ಬೀಳುತ್ತಿದ್ದ ಕಲ್ಲುಗಳ ಹಾವಳಿ ಕಡಮೆಯಾಗಿರಲಿಲ್ಲ.

Advertisement

ಭಾನಾಮತಿ ಕಾಟ ಎಂದು ಗ್ರಾಮಸ್ಥರು ಪೂಜೆ ಮಾಡಿಸಿದರೂ ಫ‌ಲ ನೀಡಿರಲಿಲ್ಲ. ಹಿರಿಯ ಅಧಿಕಾರಿಗಳು ಸೋಮವಾರ ಐದು ಸಿಸಿ ಕ್ಯಾಮೆರಾ ಅಳವಡಿಸಿದ್ದರಿಂದ ಕಲ್ಲೇಟು ನಿಂತಿದೆ. ತರಗತಿಗೆ ಹಾಜರಾಗಿದ್ದ 21 ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೇ ವಿದ್ಯಾಭ್ಯಾಸ ಮಾಡಿದರು. ಇದೇ ವೇಳೆ ಪವಾಡ ಬಯಲು ಮಾಡುವ ಶಿಕ್ಷಕರ ತಂಡ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next