Advertisement

ಮೂಡುಬಿದಿರೆ-ಗಂಟಾಲ್ಕಟ್ಟೆ: ತಂದೆ-ಮಗನ ಜಗಳ ಬಿಡಿಸಲು ಹೋದ ಸಂಬಂಧಿಕನ ಕೊಲೆ

10:00 PM May 11, 2023 | Team Udayavani |

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆ ನೀರಲ್ಕೆಯಲ್ಲಿ ತಂದೆ-ಮಗ ಜಗಳವಾಡುತ್ತಿದ್ದಾಗ ಜಗಳ ಬಿಡಿಸಲು ಹೋದ ಸಂಬಂಧಿಕನೇ ಹತ್ಯೆಗೀಡಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

Advertisement

ಹತ್ಯೆಗೀಡಾದ ವ್ಯಕ್ತಿ ಜಮಾಲುದ್ದೀನ್‌ (40). ವೃತ್ತಿಯಲ್ಲಿ ಗುಜರಿ ವ್ಯಾಪಾರಿಯಾಗಿದ್ದು ದನ ಕಳವು ಪ್ರಕರಣ ಸಹಿತ ರೌಡಿಶೀಟರ್‌ ಪಟ್ಟಿಯಲ್ಲಿದ್ದ ಎಂದು ತಿಳಿದುಬಂದಿದೆ. ಈತನ ಅಕ್ಕನ ಗಂಡ ಮಹಮ್ಮದ್‌ ಸಾಹೀಬ್‌ ತನ್ನ ಬಾವನ‌ನ್ನೇ ಕೊಲೆ ಮಾಡಿದ ಆರೋಪಿ.

ಸಾಹೀಬ್‌ನ ಮಗ ಇಮಾದ್‌ ಹೊರದೇಶದಿಂದ ವಾರದ ಹಿಂದೆ ಮನೆಗೆ ಬಂದಿದ್ದು, ಆರೋಪಿ ಸಾಹೀಬ್‌ ಮತ್ತು ಇಮಾದ್‌ನ ನಡುವೆ ಗುರುವಾರ ಬೆಳಗ್ಗೆ ಗಲಾಟೆ ನಡೆದಿದೆ. ಇದನ್ನು ಬಿಡಿಸಲು ಹೋದ ಜಮಾಲುದ್ದೀನ್‌ನನ್ನು ಆರೋಪಿ ಸಾಹೀಬ್‌ ಚೂರಿಯಿಂದ ಇರಿದಿದ್ದು, ಜಮಾಲುದ್ದೀನ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆರೋಪಿಯು ಚಿಕ್ಕಮಗಳೂರಿನವನಾಗಿದ್ದು ಕೆಲವು ವರ್ಷಗಳಿಂದ ಗಂಟಾಲ್ಕಟ್ಟೆ ನೀರಲ್ಕೆಯಲ್ಲಿ ಬಾವನ ಮನೆಯ ಹತ್ತಿರವವೇ ಮನೆಮಾಡಿಕೊಂಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಮೂಡುಬಿದಿರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next