Advertisement

ನೀರಿನ ಸಂಪ್‌ಗೆ ಬಿದ್ದು ತಾಯಿ, ಮಗಳು ಆತ್ಮಹತ್ಯೆ

11:40 AM Oct 30, 2017 | Team Udayavani |

ಬೆಂಗಳೂರು: ಮನೆ ಮುಂದಿನ ನೀರಿನ ಸಂಪ್‌ಗೆ ಬಿದ್ದು ವೃದ್ಧ ತಾಯಿ, ಹಾಗೂ ವಿಕಲಚೇತನ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಂಚಶೀಲನಗರದ ಪಾರ್ವತಮ್ಮ (56) ಆಶಾ (32) ಮೃತರು.

Advertisement

ಭಾನುವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದಿದ್ದ ವೇಳೆ ತಾಯಿ,ಮಗಳು ಡೆತ್‌ನೋಟ್‌ ಬರೆದಿಟ್ಟು  ನೀರಿನ ಸಂಪ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ಬಂದ ಪಾರ್ವತಮ್ಮ ಪತಿ ಹಾಗೂ ಮಗ ಹುಡುಕಾಡಿ, ಕೊನೆಗೆ ಸಂಪ್‌ಬಳಿ ತೆರಳಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ಮೃತರು ಸಾಯುವ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ನಿವೃತ್ತ ಸರ್ಕಾರಿ ನೌಕರರ ಪತ್ನಿಯಾದ ಪಾರ್ವತಮ್ಮ, ವಿಶೇಷ ಚೇತನೆಯಾಗಿರುವ ಅವಿವಾಹಿತ ಮಗಳು ಆಶಾ, ಮತ್ತೂಬ್ಬ ಮಗ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next