Advertisement
ಪರೋಕ್ಷ ತೆರಿಗೆ ಸಂಗ್ರಹ ವಿಚಾರದಲ್ಲಿ ಜಿಎಸ್ಟಿಯ ಕಾಣಿಕೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಈ ಸಮೀಕ್ಷೆ, ಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಸ್ವಲ್ಪಮಟ್ಟಿನ ಸಾಧನೆಯನ್ನೂ ಪ್ರಸ್ತಾವಿಸಿದೆ. ಮನೆ, ಆಸ್ತಿ ತೆರಿಗೆ ಮತ್ತು ಭೂ ಕಂದಾಯ ವಿಚಾರದಲ್ಲಿ ಸ್ಥಳೀಯ ಮಟ್ಟದ ಪಂಚಾಯತ್ಗಳಿಗೇ ಹೆಚ್ಚಿನ ಅಧಿಕಾರ ಮತ್ತು ಈಗ ಇರುವ ಅಧಿಕಾರವನ್ನು ಜಾಗೃತಗೊಳಿಸಬೇಕಾದ ಅಗತ್ಯವೂ ಇದೆ ಎಂದು ಈ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಪ್ರತ್ಯಕ್ಷ ತೆರಿಗೆ ವಿಚಾರದಲ್ಲಿ ಕರ್ನಾಟಕ, ಕೇರಳ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಸ್ವಲ್ಪಮಟ್ಟಿನ ಸಾಧನೆ ಮಾಡಿವೆ. ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಸ್ಥಳೀಯ ಪಂಚಾಯತ್ಗಳು ಅಭಿವೃದ್ಧಿ ನಿಧಿಗಾಗಿ ಸಂಪೂರ್ಣವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನೇ ಅವಲಂಬಿಸಿಕೊಂಡಿರುತ್ತವೆ. ಆದರೆ, ಈ ಮೂರು ರಾಜ್ಯಗಳು ಸ್ಥಳೀಯವಾಗಿಯೇ ಆಸ್ತಿ, ಭೂ ತೆರಿಗೆ ವಸೂಲಿ ಮಾಡಿ ತಮ್ಮ ಪ್ರದೇಶಗಳ ಅಭಿವೃದ್ಧಿಗೆ ಸ್ವಲ್ಪ ಮಟ್ಟಿನ ಆದಾಯವನ್ನು ಸೃಜಿಸಿಕೊಳ್ಳುತ್ತವೆ ಎಂದು ಈ ಸಮೀಕ್ಷೆ ಹೇಳಿದೆ.
Related Articles
Advertisement
ರೈಲ್ವೇ ಅಭಿವೃದ್ಧಿಗೆ ಹೆಚ್ಚಿನ ಒತ್ತು: ರೈಲ್ವೇಯು ಈಗಲೂ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವುದರಿಂದ, ಈ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು, ಆಧುನೀಕರಣಗೊಳಿಸುವುದು ಅನಿವಾರ್ಯ. ಹಾಗಾಗಿಯೇ, ಸರಕಾರ, ನಿರಂತರವಾಗಿ ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುತ್ತಿದೆ ಎಂದರು.