Advertisement

ಸಾಧಕ ವಿದ್ಯಾರ್ಥಿಗಳ ಹುಡುಕಿ ಬಹುಮಾನ ಸಹಿತ ಹಾಸ್ಟೆಲ್‌ಗೆ ಆಗಮಿಸಿದ ಶಾಸಕ

10:40 PM May 29, 2019 | Team Udayavani |

ಕಾಸರಗೋಡು: ಸಾಧಕ ವಿದ್ಯಾರ್ಥಿಗಳಿಗಾಗಿ ಬಹುಮಾನಗಳ ಸಹಿತ ಶಾಸಕ ಎನ್‌.ಎ. ನೆಲ್ಲಿಕುನ್ನು ಹಾಸ್ಟೆಲ್‌ಗೆ ಆಗಮಿಸಿದುದು ಅಲ್ಲಿನ ಮಂದಿಗೆ ಏಕಕಾಲಕ್ಕೆ ಅಚ್ಚರಿ ಮತ್ತು ಸಂತಸ ನೀಡಿದೆ.

Advertisement

ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಸ್ವಾಮ್ಯ ದಲ್ಲಿ ಕಾಸರಗೋಡು ಬ್ಲಾಕ್‌, ನಗರಸಭೆ ವ್ಯಾಪ್ತಿಯ ಮೂರು ಪ್ರೀಮೆಟ್ರಿಕ್‌ ಹಾಸ್ಟೆಲ್‌ಗ‌ಳಿಗೆ ಶಾಸಕ ಈ ರೀತಿ ಭೇಟಿ ಕೊಟ್ಟರು. ಇಲ್ಲಿನ ನಿವಾಸಿಗಳಾಗಿರುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮಕ್ಕಳನ್ನು ಅಭಿನಂದಿಸುವ ಉದ್ದೇಶದಿಂದ ಬಹುಮಾನಗಳ ಸಹಿತ ಅವರು ಬಂದಿದ್ದರು.

ಕಾಸರಗೋಡು ಬ್ಲಾಕ್‌ ವ್ಯಾಪ್ತಿಯ ಬದಿಯಡ್ಕ ಹಾಸ್ಟೆಲ್‌ನಲ್ಲಿ ಕಲಿತ 4 ಮಂದಿ ವಿದ್ಯಾರ್ಥಿಗಳಿಗೆ, ಕಾಸರಗೋಡು ನಗರಸಭೆ ವ್ಯಾಪ್ತಿಯ ಹುಡುಗರ ಹಾಸ್ಟೆಲ್‌ನ 18 ವಿದ್ಯಾರ್ಥಿ ಗಳಿಗೆ ಅವರು ಬಹುಮಾನವಿತರಿಸಿ ಅಭಿನಂದಿಸಿದರು.

ಸಮಾಜದಲ್ಲಿ ಹಿಂದುಳಿದಿ ರುವ ಜನಾಂಗದ ಮಕ್ಕಳ ಭವಿತವ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಈ ಹಾಸ್ಟೆಲ್‌ಗ‌ಳ ಚಟುವಟಿಕೆ ಅಭಿನಂದನಾರ್ಹ ಎಂದವರು ಈ ವೇಳೆ ತಿಳಿಸಿದರು. ಎಸ್‌.ಸಿ.ಡಿ.ಒ. ಬಶೀರ್‌ ಪಿ.ಬಿ., ವಾರ್ಡನ್‌ಗಳಾದ ಟಿ.ಕುಂಞಿರಾಮನ್‌, ಸುಮ, ಮಧು, ಧನೇಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next