Advertisement

ಅಹಿತಕರ ಘಟನೆಗಳಿಗೆ ಉಸ್ತುವಾರಿ ಸಚಿವರು ಕಾರಣ: ನಳಿನ್‌

03:25 AM Jul 13, 2017 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿ ರುವ ಎಲ್ಲ ರೀತಿಯ ಅಹಿತರ ಘಟನೆಗಳಿಗೆ ಉಸ್ತುವಾರಿಸಚಿವರ ಹಾಗೂ ಸರಕಾರದ ವೈಫಲ್ಯವೇ ಕಾರಣ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳ ಆರೋಪಿ ಗಳಿನ್ನೂ ಪತ್ತೆಯಾಗಿಲ್ಲ. ಪಂಜಿಮೊಗರು ಜೋಡಿಕೊಲೆ ಪ್ರಕರಣ, ಉಪ್ಪಿನಂಗಡಿ ಶಿಕ್ಷಕಿ ಕೊಲೆ ಪ್ರಕರಣ ಮಾತ್ರವಲ್ಲದೇ ಸಚಿವರಾದ ಯು.ಟಿ. ಖಾದರ್‌ ಹಾಗೂ ಬಿ. ರಮಾನಾಥ ರೈ ಅವರ ಕ್ಷೇತ್ರದಲ್ಲಿ ನಡೆದ ವಿವಿಧ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳ ನೈಜ ಆರೋಪಿಗಳ ಬಂಧನ ಇನ್ನೂ ನಡೆದಿಲ್ಲ. ಈ ಪ್ರಕರಣಗಳಲ್ಲಿ ಇನ್ನೂ ನ್ಯಾಯ ಸಿಗದಿರುವುದಕ್ಕೆ ಪೊಲೀಸ್‌ ವೈಫಲ್ಯ ಕಾರಣ. ಅಲ್ಲದೇ ಪೊಲೀಸರನ್ನು ರಾಜಕೀಯದವರ ಕೈಗೊಂಬೆಯನ್ನಾಗಿಸಲಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next