Advertisement

ಮದ್ದುಗುಂಡಿನೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದ ವ್ಯಾಪಾರಿ

06:00 AM May 06, 2018 | Team Udayavani |

ಮಂಗಳೂರು: ಬೆಳ್ತಂಗಡಿಯ ಅಡಿಕೆ ವ್ಯಾಪಾರಿ ಒಬ್ಬರು 15 ಮದ್ದುಗುಂಡುಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಶನಿವಾರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಪ್ರಧಾನಿ ಮೋದಿ ಅವರ ಭೇಟಿ ಕಾರ್ಯಕ್ರಮವೂ ಇದ್ದ ಕಾರಣ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.

Advertisement

ಬೆಳ್ತಂಗಡಿಯ ಇಸ್ಮಾಯಿಲ್‌ 67 ವರ್ಷ ವಯಸ್ಸಿನ ವೃದ್ಧರಾಗಿದ್ದು, ಅವರು ನಾಗಪುರಕ್ಕೆ ಹೊರಟಿದ್ದರು ಎನ್ನಲಾಗಿದೆ. ಪೊಲೀಸರು ವಿಚಾರಣೆಗೆ ಒಳ ಪಡಿಸಿದಾಗ ಈ ವ್ಯಕ್ತಿ ತಾನು ಅಧಿಕೃತವಾಗಿ ಗನ್‌ ಲೈಸನ್ಸ್‌ ಹೊಂದಿರುವುದಾಗಿ ತಿಳಿಸಿದ್ದಾರೆ.

ಮಧ್ಯಾಹ್ನ 12.55ಕ್ಕೆ ಹೊರಡುವ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರ ಕೈಚೀಲವನ್ನು ಸಿಐಎಸ್‌ಎಫ್‌ ಭದ್ರತಾ ಸಿಬಂದಿ ಪರಿಶೀಲಿಸಿದಾಗ ಬ್ಯಾಗಿನಲ್ಲಿ 32 ಮಿ.ಮೀ. ನ 15 ಸಜೀವ ಮದ್ದುಗುಂಡುಗಳು ಪತ್ತೆಯಾದವು. ಅವುಗಳನ್ನು ಯಾತಕ್ಕಾಗಿ ಬ್ಯಾಗಿನಲ್ಲಿ ಇರಿಸಿದ್ದರು ಎಂಬುದು ತಿಳಿದು ಬಂದಿಲ್ಲ. ತನ್ನ ಬಳಿ ಗನ್‌ ಲೈಸನ್ಸ್‌ ಇದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಈ ಬಗೆಗೆ ದಾಖಲೆ ಪತ್ರಗಳನ್ನು ತಂದೊಪ್ಪಿಸುವಂತೆ ಸೂಚಿಸಿ ಭದ್ರತಾ ಸಿಬಂದಿ ಅವರನ್ನು ಬಜಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next