Advertisement

ಯುವತಿ ಚುಡಾಯಿಸಿದ ವ್ಯಕ್ತಿ ತಲೆ ಬೋಳಿಸಿ ಮೆರವಣಿಗೆ

02:45 AM Jul 16, 2017 | Harsha Rao |

ಬೆಂಗಳೂರು: ರಾಜ್ಯದ ವಿವಿಧೆಡೆ ಅತ್ಯಾಚಾರ, ಯುವತಿ ಚುಡಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಿಟ್ಟಿನಹಳ್ಳಿ ತಾಂಡಾದಲ್ಲಿ ಕುಡಿದ ಅಮಲಿನಲ್ಲಿ ಮೂಕ ಯುವತಿಯನ್ನು ಚುಡಾಯಿಸಿದ ವ್ಯಕ್ತಿಯನ್ನು ಯುವತಿ ಸಂಬಂಧಿಕರು ತಲೆ ಬೋಳಿಸಿ ಊರಿನಲ್ಲಿ ಮೆರವಣಿಗೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಂಕರ
ರಾಠೊಡ (50) ಯುವತಿಗೆ ಚುಡಾಯಿಸಿದ ಆರೋಪಿ. ಹಿಟ್ಟಿನಹಳ್ಳಿ ತಾಂಡಾದ ತೋಟದ ಮನೆಯಲ್ಲಿ ಜು. 12ರಂದು ಸಂಜೆ ಈ ಘಟನೆ ನಡೆದಿದ್ದು, ಮರುದಿನ ಆತನ ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ.

Advertisement

ಪ್ರತ್ಯಕ್ಷದರ್ಶಿಗಳಿಂದ ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆ ತಂದಿದ್ದರು. ಯುವತಿ ಸಹೋದರ ಈ ಕುರಿತು ಪ್ರಕರಣ ದಾಖಲಿಸಿದ್ದು, ತನಗೆ ಹೊಡೆದಿದ್ದಾರೆ ಎಂದು ಎಂಟು ಜನರ ವಿರುದ್ಧ ಆರೋಪಿ ಶಂಕರ ರಾಠೊಡ
ಪ್ರತಿದೂರು ನೀಡಿದ್ದಾನೆ.

ವಿದ್ಯಾರ್ಥಿನಿ ದೂರು: ಉಪನ್ಯಾಸಕರೊಬ್ಬರು ಮದುವೆಯಾಗುವುದಾಗಿ ನಂಬಿಸಿ 3 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದ ಯುವತಿ ಕೊಪ್ಪಳ ಮಹಿಳಾ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. 2014ರಲ್ಲಿ ಕೊಪ್ಪಳ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು
ಅಭ್ಯಾಸ ಮಾಡುತ್ತಿದ್ದ ವೇಳೆ ಕಾಲೇಜಿನ ಉಪನ್ಯಾಸಕ ಬಾಳಪ್ಪ ಹಡಪದ ಎಂಬುವರು ತನ್ನೊಂದಿಗೆ ಸಲುಗೆ ಬೆಳೆಸಿ, ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿ ಕೊಂಡಿದ್ದಾರೆ.

ಈಗ ಮದುವೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ.

ಅಪಹರಿಸಿ ಅತ್ಯಾಚಾರ: 13 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರು
ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಗುರುವನಹಳ್ಳಿ ಗ್ರಾಮದ ವಸಂತ ನಗರ ಕಾಲೋನಿಯಲ್ಲಿ ನಡೆದಿದೆ. ಆರೋಪಿ ರಂಗಸ್ವಾಮಿ (42) ಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿ 10 ದಿನದ ಹಿಂದೆ ಸಂಬಂಧಿಕರ ಮಗಳನ್ನು ಪೋಷಕರಿಲ್ಲದ ಸಮಯದಲ್ಲಿ ಪುಸಲಾಯಿಸಿ ಕರೆದೊಯ್ದಿದ್ದ, ಕೆಲಸಕ್ಕೆಂದು ಹೋಗಿದ್ದ ಬಾಲಕಿ ಪೋಷಕರು ಮನೆಗೆ ಹಿಂತಿರುಗಿದಾಗ ಮಗಳು ಕಾಣೆಯಾಗಿರುವುದು ತಿಳಿದುಬಂದಿದೆ. ಆರೋಪಿ ರಂಗಸ್ವಾಮಿ ಮೇಲೆ ಶಂಕೆ ವ್ಯಕ್ತಪಡಿಸಿ ಪೋಷಕರು ದೂರು ದಾಖಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next