Advertisement

ಕೃಷ್ಣಾ ನದಿ ಪ್ರವಾಹಕ್ಕೆ ತೇಲಿ ಬಂದ ವ್ಯಕ್ತಿ ಶವ

11:27 PM Aug 18, 2019 | Team Udayavani |

ದೇವದುರ್ಗ: ಕೃಷ್ಣಾ ನದಿ ಪ್ರವಾಹದಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲಿಬಂದು ವಿದ್ಯುತ್‌ ಕಂಬದ ತಂತಿಗೆ ಸಿಲುಕಿಕೊಂಡ ಸ್ಥಿತಿಯಲ್ಲಿ ಗೂಗಲ್‌ ಗ್ರಾಮದ ನದಿ ತೀರದ ಬಳಿ ಭಾನುವಾರ ಪತ್ತೆಯಾಗಿದೆ. ಇತ್ತೀಚೆಗೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್‌ ನೀರು ಹರಿಬಿಟ್ಟಿದ್ದರಿಂದ ಕೃಷ್ಣಾ ನದಿ ಉಕ್ಕಿ ಹರಿದಿದೆ.

Advertisement

ಈಗ ನದಿಯಲ್ಲಿ ಸ್ವಲ್ಪ ನೀರಿನ ಮಟ್ಟ ಕಡಿಮೆಯಾಗಿದ್ದು, ಗೂಗಲ್‌ ಗ್ರಾಮದ ಹತ್ತಿರ ನದಿ ಬಳಿಯ ವಿದ್ಯುತ್‌ ಕಂಬದ ವೈರ್‌ಗೆ ಅಪರಿಚಿತ ವ್ಯಕ್ತಿಯ ಶವ ಸಿಲುಕಿಕೊಂಡಿದೆ. ಶವ ಕೊಳೆತಿದ್ದು, ಗುರುತು ಹಿಡಿಯದಂತಾಗಿದೆ. ಈ ಕುರಿತು ಗಬ್ಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next