Advertisement

ಕಳೆದೋದ ಕಾಳಿದಾಸ ಬಂದ್‌ ಬಿಟ್ಟ!

09:18 AM Sep 26, 2019 | Lakshmi GovindaRaju |

ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಒಂದಷ್ಟು ಚಿತ್ರಗಳು ನಿರೀಕ್ಷೆ ಹುಟ್ಟುಹಾಕಿರೋದು ಸುಳ್ಳಲ್ಲ. ಹೀಗೆ ರೆಗ್ಯುಲರ್‌ ಜಾನರ್‌ ಬಿಟ್ಟ ಸಿನಿಮಾಗಳ ಸಾಲಿನಲ್ಲಿ ಸಾಕಷ್ಟು ಸಿನಿಮಾಗಳು ಕಾಣಸಿಗುತ್ತವೆ. ಅದರಲ್ಲಿ “ಕಾಣದಂತೆ ಮಾಯವಾದನು’ ಚಿತ್ರ ಕೂಡಾ ಒಂದು. ಈ ಹಿಂದೆ “ಜಯಮ್ಮನ ಮಗ’ ಚಿತ್ರ ನಿರ್ದೇಶಿಸಿದ್ದ ವಿಕಾಸ್‌ ಹೀರೋ ಆಗಿ ನಟಿಸುತ್ತಿರುವ ಸಿನಿಮಾವಿದು.

Advertisement

ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಇತ್ತೀಚೆಗಷ್ಟೇ ಚಿತ್ರತಂಡ ಆಯೋಜಿಸಿದ್ದ ಟ್ಯಾಗ್‌ಲೈನ್‌ ಸ್ಪರ್ಧೆಯಲ್ಲಿ ಚಿತ್ರಕ್ಕೆ “ಗೋರಿ ಆದ್ಮೇಲೆ ಹುಟ್ಟಿದ್‌ ಸ್ಟೋರಿ’ ಎಂಬ ಟ್ಯಾಗ್‌ಲೈನ್‌ ಸಿಕ್ಕಿದೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಅದು ಪುನೀತ್‌ರಾಜ್‌ಕುಮಾರ್‌ ಹಾಡಿರುವ ಹಾಡು.

ಈ ಹಿಂದೆ ಚಿತ್ರದ ಟ್ರೇಲರ್‌ ನೋಡಿ ಮೆಚ್ಚಿಕೊಂಡಿದ್ದ ಪುನೀತ್‌ ರಾಜ್‌ಕುಮಾರ್‌ ಈಗ “ಕಾಣದಂತೆ ಮಾಯವಾದನು’ ಚಿತ್ರಕ್ಕೊಂದು ಹಾಡು ಹಾಡಿದ್ದಾರೆ. “ಕಳೆದೋದ ಕಾಳಿದಾಸ’ ಎಂಬ ಹಾಡನ್ನು ಪುನೀತ್‌ರಾಜ್‌ಕುಮಾರ್‌ ಹಾಡಿದ್ದಾರೆ. ಈ ಹಾಡು ಆನಂದ್‌ ಆಡಿಯೋದಲ್ಲಿ ಮಂಗಳವಾರ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಾಜ್‌ ಪತ್ತಿಪಾಟಿ ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next