Advertisement
ರಾಜ್ಯದ ಹಲವು ಭಾಗಗಳಲ್ಲಿ ಜಾನಪದ ಕಲೆಯನ್ನೇ ಉಸಿರಾಗಿಸಿಕೊಂಡವರು ಸದ್ದಿಲ್ಲದೇ ಅದರ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲೂ ಕಲಾಪ್ರತಿಭೆ ಮೆರೆದಿದ್ದಾರೆ. ಇಂತಹ ಸಾಧಕರ ಜೀವನ ಚರಿತ್ರೆಯನ್ನು ಸಾಕ್ಷ್ಯಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಇದಾಗಿದೆ. ಕಲಾವಿದರ ಜೀವನ ಮತ್ತು ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆ ಆಗಲಿ ಎಂಬುದು ಅಕಾಡೆಮಿಯ ಉದ್ದೇಶ.
Related Articles
Advertisement
ಸರ್ಕಾರ ಗ್ರೀನ್ ಸಿಗ್ನಲ್ ನೀಡ್ಬೇಕು: ಯೋಜನೆ ಸಂಬಂಧ ನೀಲಿನಕ್ಷೆ ಸಿದ್ಧಪಡಿಸಿರುವ ಅಕಾಡೆಮಿಯು ಸರ್ಕಾರದ ಅನುಮತಿ ಪಡೆಯುವ ನಿರೀಕ್ಷೆಯಲ್ಲಿದೆ. ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯವನ್ನು ಟೆಂಡರ್ ಮೂಲಕ ಒಬ್ಬ ವ್ಯಕ್ತಿಗೆ ನೀಡಬೇಕೋ ಅಥವಾ ಸಾಕ್ಷ್ಯಚಿತ್ರ ನಿರ್ಮಾಣ ಸಂಸ್ಥೆಗೆ ನೀಡಬೇಕೋ ಎಂಬುದನ್ನು ಸರ್ಕಾರ ನಿರ್ಧರಿಸಬೇಕಿದೆ. ಹೀಗಾಗಿ, ಸರ್ಕಾರದ ಸೂಚನೆ ಬಳಿಕ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಅಕಾಡೆಮಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ವೆಬ್ಸೈಟ್ನಲ್ಲಿ ಸಾಕ್ಷ್ಯಚಿತ್ರ: ಸುಮಾರು 15 ತಾಸುಗಳ ಡಿಜಿಟಲ್ ಆತ್ಮಕಥನ ಇದಾಗಿರಲಿದೆ. ಈ ಎಲ್ಲಾ ಸಾಕ್ಷ್ಯಚಿತ್ರಗಳನ್ನು ಜಾನಪದ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗುತ್ತದೆ. ಅಲ್ಲದೆ, 15 ಗಂಟೆಗಳ ಕಥನವನ್ನು ಒಂದು ಗಂಟೆಗೆ ಸಂಕ್ಷಿಪ್ತಗೊಳಿಸಿ ಜಾನಪದ ಅಕಾಡೆಮಿಯ ವೆಬ್ಸೆಟ್ನಲ್ಲಿ ಪ್ರಕಟಿಸಲು ಚಿಂತಿಸಿದೆ.
ನಾಡಿನ ಜಾನಪದ ಕಲೆ ಅಭಿವೃದ್ಧಿಗಾಗಿ ಅಕಾಡೆಮಿ ಹಲವು ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವುದು ಸೇರಿದೆ. ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ನಶಿಸುತ್ತಿದು,ª ಅವುಗಳನ್ನು ಮುಂದಿನ ತಲೆಮಾರಿಗೆ ಹಿಡಿದಿಟ್ಟುಕೊಳ್ಳುವ ಕೆಲಸ ಇದಾಗಿದೆ.-ಟಾಕಪ್ಪ ಕಣ್ಣೂರು, ಜಾನಪದ ಅಕಾಡೆಮಿ ಅಧ್ಯಕ್ಷ * ದೇವೇಶ ಸೂರಗುಪ್ಪ