ಕಾಪು: ಕಾನೂನುಗಳು ಸಾರ್ವಜನಿಕರ ಅನುಕೂಲಕ್ಕಾಗಿ ಇರುತ್ತವೆಯೇ ಹೊರತು ಸರಕಾರದ ಹಿತಕ್ಕಾಗಿ ಅಲ್ಲ. ಅದನ್ನು ಸಾರ್ವಜನಿಕರು ಕೂಡಾ ಮನಗಂಡು ರಸ್ತೆ ಸುರಕ್ಷತೆಯನ್ನು ಕಾಪಾಡುವಲ್ಲಿ ಇಲಾಖೆಯೊಂದಿಗೆ ಕೈ ಜೋಡಿಸಿ ಸಹಕರಿಸುವುದು ಅತ್ಯಗತ್ಯವಾಗಿದೆ ಎಂದು ಕಾಪು ಪೊಲೀಸ್ ಠಾಣಾ ಸಿಬಂದಿ ಗಣೇಶ್ ನಾಯ್ಕ ಹೇಳಿದರು.
ಕಾಪು ಪೊಲೀಸ್ ಠಾಣೆಯ ಸಹಕಾರದೊಂದಿಗೆ ಕಾಪು ರೋಟರಿ ಕ್ಲಬ್ನ ಶತಾಬ್ದಿ ವೇದಿಕೆಯಲ್ಲಿ ನಡೆದ ರಸ್ತೆ ಸುರಕ್ಷತಾ ಮಾಸಾಚರಣೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಹನ ಸಂಚರಿಸುವಾಗ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಹಾಕುವುದು, ಟ್ರಾಫಿಕ್ ಸಿಗ್ನಲ್ ಪಾಲಿಸುವುದು, ನಿಧಾನವಾಗಿ ಚಲಿಸುವುದು, ಅಮಲು ಪದಾರ್ಥ ಸೇವಿಸಿ ವಾಹನ ಚಾಲನೆ ಮಾಡದಿರುವುದು, ಇನ್ಸೂರೆನ್ಸ್ ಪಾವತಿಸುವುದು ಇತ್ಯಾದಿ ಕಾನೂನುಗಳನ್ನು ಸಾರ್ವಜನಿಕರು ಪಾಲನೆ ಮಾಡಬೇಕು ಎಂದರು.
ಕಾಪು ರೋಟರಿ ಕ್ಲಬ್ನ ಕಾರ್ಯದರ್ಶಿ ಪ್ರವೀಣ್, ರೋಟರಿ ವಲಯ ಸೇನಾನಿ ಕೆ. ಸದಾಶಿವ ಭಟ್, ಪೂರ್ವಾಧ್ಯಕ್ಷರಾದ ವಿದ್ಯಾಧರ ಪುರಾಣಿಕ್, ಶ್ರೀನಿವಾಸ ರಾವ್, ಪೊಲೀಸ್ ಠಾಣಾ ಸಿಬಂದಿಗಳಾದ ರಮೇಶ್, ಗಿರೀಶ್ ಉಪಸ್ಥಿತರಿದ್ದರು.ಕಾಪು ರೋಟರಿ ಅಧ್ಯಕ್ಷ ಜೇಮ್ಸ್ ಡಿ’ ಸೋಜ ಸ್ವಾಗತಿಸಿದರು. ಮಾಜಿ ಸಹಾಯಕ ಗವರ್ನರ್ ಮನೋಹರ್ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.