Advertisement

ಕಾಮಗಾರಿ ಮುಗಿದ್ರೂ ಕಟ್ಟಡಕ್ಕಿ ಉದ್ಘಾಟನೆ ಭಾಗ್ಯ

12:46 PM Nov 13, 2021 | Team Udayavani |

ಬಂಗಾರಪೇಟೆ: ಎರಡು ವರ್ಷಗಳಿಂದ ಕೊರೊನಾ ಹಾವಳಿ ಕಾರಣವೊಡ್ಡಿ ಕೋಟಿ ರೂ.ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ನೂತನ ಕಟ್ಟಡವು ಜನಪ್ರತಿನಿಧಿಗಳ ರಾಜಕೀಯ ಕಿತ್ತಾಟದಿಂದ ಉದ್ಘಾಟನೆ ಭಾಗ್ಯ ಕಂಡಿಲ್ಲ.

Advertisement

ಇದೇ ವೇಳೆ ಮೂರು ವರ್ಷಗಳ ಹಿಂದೆಯೇ ವಾಲ್ಮೀಕಿ ಭವನ ಬಳಕೆಗೆ ಸಿದ್ಧವಾಗಿದ್ದರೂ ಉದ್ಘಾಟನೆ ಕಂಡಿಲ್ಲ, ಈಗ ಲೋಕೋಪಯೋಗಿ ಇಲಾಖೆ ಎಇಇ ಕಚೇರಿ ಸಹ ಕಾರ್ಯನಿರ್ವಹಣೆಗೆ ಸಜ್ಜಾಗಿದ್ದರೂ ಸ್ಥಳೀಯ ಶಾಸಕರು ಮತ್ತು ಸಂಸದರ ನಡುವೆ ಹೊಂದಾಣಿಕೆ ಇಲ್ಲದೆ, ಉದ್ಘಾಟನೆಗೆ ಸಮಯ ನೀಡದ ಕಾರಣ, ಕಚೇರಿ ಪಾಳು ಬಿದ್ದಿದೆ. ಪ್ರಸ್ತುತ ಈ ಕಚೇರಿಯು ಎಇಇಗೆ ನೀಡಿರುವ ಮನೆಯಲ್ಲಿ ನಡೆಯುತ್ತಿರುವುದು ವಿಪರ್ಯಾಸ.

ಹೆಚ್ಚುವರಿ ಅನುದಾನ ನೀಡಿಲ್ಲ: ನೂತನ ಕಟ್ಟಡಕ್ಕೆ ಫ‌ರ್ನಿಚರ್‌ ಅಳವಡಿಸಲು ಅನುದಾನದ ಕೊರತೆ ಇದ್ದು, ಹಣ ಬಿಡುಗಡೆ ಮಾಡಲು ಪಿಡಬ್ಲೂéಡಿ ಸಚಿವರಾಗಿದ್ದ ಗೋವಿಂದ ಕಾರಜೋಳಗೆ 2 ವರ್ಷಗಳಿಂದ ಮನವಿ ಮಾಡಿದ್ದರೂ ಪ್ರಯೋಜನ ವಾಗಿಲ್ಲ. ಹೀಗಾಗಿ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ:- ಮೋದಿ ವಿಶ್ವ ನಾಯಕ: ಜಾಧವ

 ಕಚೇರಿಗಳಿಗೆ ಸ್ವಂತ ಕಟ್ಟಡ: ಪಟ್ಟಣದಲ್ಲಿನ ಸರ್ಕಾರಿ ಇಲಾಖೆಗಳು ಈ ಹಿಂದೆ ಬಾಡಿಗೆ ಕಟ್ಟಡಗಳಲ್ಲಿ ಇದ್ದವು. ಪ್ರತಿ ಕಚೇರಿ ಒಂದೊಂದು ದಿಕ್ಕಿನಲ್ಲಿದ್ದವು, ಸಾರ್ವಜನಿಕರಿಗೆ ಕಚೇರಿ ಪತ್ತೆ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಇದನ್ನು ಮನಗಂಡು ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಸ್ವಂತ ಕಟ್ಟಡ ಒದಗಿಸಿದ್ದಾರೆ. ಆದರೂ, ಕಾರ್ಮಿಕ ಇಲಾಖೆ, ಸಿಡಿಪಿಒ, ರೇಷ್ಮೆ ಮತ್ತು ಕೃಷಿ ಇಲಾಖೆ ಕಚೇರಿ ಮಾತ್ರ ಈಗಲೂ ಬಾಡಿಗೆ ಕಟ್ಟಡದಲ್ಲಿದೆ.

Advertisement

ಉದ್ಘಾಟನೆ ಆಗಿಲ್ಲ: ಲೋಕೋಪಯೋಗಿ ಇಲಾಖೆ ಹಳೇ ಕಟ್ಟಡ ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಹಲವು ತಿಂಗಳು ಕಳೆದಿದೆ. ಶಾಸಕರು ಉದ್ಘಾಟನೆಗೆ ಸಿದ್ಧವಾಗಿದ್ದಾರೆ. ಆದರೆ, ಶಿಷ್ಟಾಚಾರದ ಪ್ರಕಾರ ಸಂಸದರನ್ನೂ ಕಟ್ಟಡ ಉದ್ಘಾಟನೆಗೆ ಆಹ್ವಾನಿಸಬೇಕು. ಅದರಂತೆ ಅಧಿಕಾರಿಗಳು ಸಂಪರ್ಕಿಸಿದ್ದು, ಅವರು ದಿನಾಂಕ ನಿಗದಿಪಡಿಸುವಲ್ಲಿ ವಿಳಂಬ ಮಾಡಿದ್ದರಿಂದ ಉದ್ಘಾಟನೆ ಮುಂದಕ್ಕೆ ಹೋಗುತ್ತಿದೆ ಎನ್ನಲಾಗಿದೆ.

ಸಂಸದರು ಮಾಡುವ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ಬೆಂಬಲಿಗರು, ಶಾಸಕರ ಕಾಮಗಾರಿಗಳಿಗೆ ಸಂಸದರ ಬೆಂಬಲಿಗರು ಅಡ್ಡಿಪಡಿಸಿದ್ದರಿಂದ ಪರಿಣಾಮ ಲೋಕೋಪಯೋಗಿ ಕಟ್ಟಡ ಹಾಗೂ ವಾಲ್ಮೀಕಿ ಭವನ ಉದ್ಘಾಟನೆಗೆ ಸಿದ್ಧವಾಗಿದ್ದರೂ ಸಮಯ ನಿಗದಿ ಮಾಡಲು ಸಂಸದರು ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂಬ ಆರೋಪ ಶಾಸಕರ ಬೆಂಬಲಿಗರದ್ದಾಗಿದೆ. ಈಗ ಎಂಎಲ್ಸಿ ಚುನಾವಣೆ ಘೋಷಣೆಯಿಂದ ಉದ್ಘಾಟನೆ ಮತ್ತಷ್ಟು ವಿಳಂಬ ವಾಗುವುದು ಗ್ಯಾರಂಟಿಯಾಗಿದೆ. ಎಇಇ ಕಚೇರಿ ಉದ್ಘಾಟನೆ ವಿಳಂಬದಿಂದ ಕಚೇರಿ ಸುತ್ತ ಕಸದ ರಾಶಿ ಹಾಕಲಾಗುತ್ತಿದೆ. ಅನೈತಿಕ ಚಟುವಟಿಕೆಗಳ ತಾಣ ವಾಗುವ ಮೊದಲು ಕಟ್ಟಡ ಉದ್ಘಾಟನೆ ಮಾಡಬೇಕು ಎಂದು ತಾಲೂಕಿನ ಜನರು ಒತ್ತಾಯಿಸಿದ್ದಾರೆ.

“ಲೋಕೋಪ ಯೋಗಿ ಇಲಾಖೆ ಎಇಇ ಆಡಳಿತ ಕಚೇರಿ ನೂತನ ಕಟ್ಟಡಕ್ಕೆ ಫ‌ರ್ನಿಚರ್‌ ಕೊರತೆ ಇದೆ. ಕೊರೊ ನಾ ಹಾವಳಿಯಿಂದ 2 ವರ್ಷದಿಂದ ಅನು ದಾನ ಬಿಡುಗಡೆ ಮಾಡುತ್ತಿಲ್ಲ. ಸದ್ಯಕ್ಕೆ ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಉದ್ಘಾ ಟನೆ ಮಾಡಲು ಕ್ರಮಕೈಗೊಳ್ಳಲಾಗುವುದು.” – ಚಂದ್ರಶೇಖರ್‌, ಕಾರ್ಯಪಾಲಕ ಎಂಜಿನಿಯರ್‌, ಪಿಡಬ್ಲ್ಯೂಡಿ ಕೋಲಾರ

 – ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next