Advertisement

ನನ್ನೊಬ್ಬನ ರಾಜಿನಾಮೆಯಿಂದ ಸರ್ಕಾರ ಪತನವಾಗಲ್ಲ

12:58 PM Sep 23, 2018 | Team Udayavani |

ಬೆಂಗಳೂರು: ಎಸ್ಸಿ ಎಸ್ಟಿ ನೌಕರರ ಬಡ್ತಿ ಮೀಸಲಾತಿ ಜಾರಿಗೊಳಿಸುವುದು ನಮ್ಮ ಬದ್ಧತೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದು, ಅವರು ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಸಂಪುಟದಲ್ಲಿ ನಡೆದ ವಿಷಯಗಳನ್ನು ನಾನು ಬಹಿರಂಗ ಪಡೆಸುವುದಿಲ್ಲ. ನಾನೊಬ್ಬ ರಾಜೀನಾಮೆ ನೀಡಿದರೆ ಸರ್ಕಾರ ಪತನವಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್ಸಿ ಎಸ್ಟಿ ಮುಂಬಡ್ತಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಜಾರಿಗೊಳಿಸುವುದು ಸ್ವಲ್ಪ  ವಿಳಂಬವಾಗಿದೆ. ಮುಖ್ಯಮಂತ್ರಿ ತಡೆಯೊಡ್ಡುತ್ತಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ತಿಳಿಸಿದರು.

ಇದೇ ವೇಳೆ ರಫೆಲ್‌ ಯುದ್ದ ವಿಮಾನ ಖರೀದಿ ಅವ್ಯವಹಾರದ ಬಗ್ಗೆ ಫ್ರಾನ್ಸ್‌ ಮಾಜಿ ಅಧ್ಯಕ್ಷರೇ ಬಹಿರಂಗ ಪಡಿಸಿದ್ದಾರೆ.ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ ರಾಷ್ಟ್ರೀಯ ಮಟ್ಟದ ವಿಚಾರವಾಗಿದ್ದು, ಇದರ ವಿರುದ್ಧ ದೊಡ್ಡ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next