Advertisement
ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಇಂದು ಹೈನುಗಾರಿಕೆ ಹಲವು ರೈತರ ಜೀವನಧಾರವಾಗಿದೆ. ಕೋಲಾರ ಜಿಲ್ಲೆ ಹೈನುಗಾರಿಕೆಯಲ್ಲಿ ಗಣನೀಯ ಸಾಧನೆ ಮಾಡಿದೆ. ನಿರುದ್ಯೋಗ ಯುವಕ, ಯುವತಿಯವರನ್ನು ಸ್ವಾವಲಂಬಿಗಳನ್ನಾಗಿಸಲು ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಸಬ್ಸಿಡಿ ಸಹಿತ ಸಾಲವನ್ನು ನೀಡಲಾಗುತ್ತಿದ್ದು, ಫಲಾನುಭವಿಗಳು ಹೈನುಗಾರಿಕೆ ಸೇರಿದಂತೆ ನಿರ್ದಿಷ್ಟಪಡಿಸಿದ ವೃತ್ತಿಗೆ ಹಣ ಬಳಸಬಹುದಾಗಿದೆ ಎಂದರು.
Related Articles
Advertisement
ಸರಕಾರದ ಯೋಜನೆಗಳ ಫಲಾನುಭವಿಗಳು ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಳಂಬ ತೋರಿದರೆ ಬ್ಯಾಂಕ್ ಗಳು ಹೊಸಬರಿಗೆ ಸಾಲ ನೀಡಲು ಅಸಾಧ್ಯ. ಇದನ್ನು ಸಾಲ ಪಡೆದವರು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಪ್ರಗತಿ ಸಾಧಿಸಿ: ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್ರಾವ್ ಮಾತನಾಡಿ, ರಾಜೀವ್ ಗಾಂಧಿ ಚೈತನ್ಯ ಯೋಜ ನೆಯಡಿ ಜಿಲ್ಲೆಯ ಹಲವು ಬ್ಯಾಂಕ್ಗಳು ಫಲಾನುಭವಿಗಳಿಗೆ ಸಾಲ ನೀಡಿವೆ. ಸರಕಾರಿ ಯೋಜನೆಯ ಕಾನೂನಿನಂತೆ ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಸಾಲ ಬಳಸಿಕೊಂಡು ಜನಸಾಮಾನ್ಯರು ಪ್ರಗತಿ ಕಾಣಬೇಕೆಂದರು.
ಇದೇ ವೇಳೆ ನರ್ಬಾಡ್ ಬ್ಯಾಂಕ್ಜಿಲ್ಲೆಯ ಕೃಷಿ, ಕೈಗಾರಿಕೆ, ಶಿಕ್ಷಣ, ಗೃಹ ಸಾಲ, ಮೂಲಭೂತ ಸೌಕರ್ಯಗಳಿಗೆ ಅಗತ್ಯ ಸಾಲ ಮತ್ತು ವೆಚ್ಚದ ಬಗ್ಗೆ ತಯಾರಿಸಿರುವ ಪಿಎಲ್ ಪಿನ ವಾರ್ಷಿಕ ಕಿರು ಹೊತ್ತಿಗೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸುರೇಶ್, ನರ್ಬಾಡ್ ಬ್ಯಾಂಕ್ ಎಜಿಎಂ ನಟರಾಜನ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹೆಗಡೆ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಕೆ.ವಿ.ಅಶ್ವತ್ಥನಾರಾಯಣ, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆಂಪಣ್ಣ, ತರಬೇತಿ ಸಂಸ್ಥೆಯ ವೆಂಕಟೇಶ ಶಾಸ್ತ್ರೀ, ಆರ್ಥಿಕ ಸಾಕ್ಷರತಾ ಕೇಂದ್ರದ ಚೆಂಗಪ್ಪ ಭಾಗವಹಿಸಿದ್ದರು.