Advertisement

ದೇಶದ ಭವಿಷ್ಯ ಮತದಾರರ ಕೈಲಿದೆ

08:23 PM Jan 25, 2020 | Lakshmi GovindaRaj |

ಮೈಸೂರು: ದೇಶದ ಭವಿಷ್ಯ ಮತದಾರನ ಕೈಯಲ್ಲಿದ್ದು, ಯುವ ಜನತೆ ಮತದಾನದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ. ಒಂಟಿಗೂಡಿ ಹೇಳಿದರು. ಮೈಸೂರು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ತಾಲೂಕು ಆಡಳಿತದ ವತಿಯಿಂದ ಶನಿವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

Advertisement

ಶೇಖಡವಾರು ಮತದಾನವು ಗ್ರಾಮೀಣ ಭಾಗಕ್ಕಿಂತ‌ ನಗರ ಪ್ರದೇಶಗಳಲ್ಲಿ ಕಡಿಮೆ ಇರುವುದು ಕಂಡುಬರುತ್ತದೆ. ಮತದಾನದ ದಿನ ರಜೆ ಇರುವ ಹಿನ್ನೆಲೆ ನಗರ ಪ್ರದೇಶದ ವಿದ್ಯಾವಂತ ಜನರು ಪ್ರವಾಸ ಕೈಗೊಳ್ಳುವುದು ಅಥವಾ ಮತದಾನದಿಂದ ದೂರು ಉಳಿದು ಬಿಡುತ್ತಾರೆ. ಗ್ರಾಮೀಣ ಭಾಗದ ಜನರಂತೆ ತಮ್ಮ ಹಕ್ಕುಗಳನ್ನು ಚಲಾಯಿಸಿ ಶೇಕಡವಾರು ಮತದಾನವನ್ನು ನೂರಕ್ಕೆ ಏರಿಸುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ಪಾಲಿಕೆ ಆಯುಕ್ತ ಗುರುದತ್‌ ಹೆಗ್ಡೆ ಮಾತನಾಡಿ, ಇಂದಿನ ಯುವಕರಿಗೆ ಮತದಾನ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಜಾತಿ, ಹಣ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುಬೇಕು. ಇದನ್ನು ತಮ್ಮ ಪೋಷಕರಿಗೂ ತಿಳಿಸುವ ಮೂಲಕ ಅವರಲ್ಲೂ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.

ಇತ್ತೀಚೆಗೆ ಮತದಾನ ಮಾಡುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ರಾಜಕೀಯದಿಂದ ನನಗೇನು, ಯಾವ ಸಲರ್ಕಾರ ಬಂದರೆ ನನಗೇನು ಎಂಬ ಭಾವನೆ ಮೂಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಲಕ್ಷಣ. ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇದನ್ನು ಬದಲಿಸಬೇಕು. ಮತದಾನದಿಂದ ನನ್ನ ಕೊಡುಗೆ ಏನು ಎಂಬುದನ್ನು ಅರಿತುಕೊಂಡು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಜಾಥಾ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಿಗೆ ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ ಕುರಿತು ಜಾಥಾ ನಡೆಸಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮ ಹಾಗೂ ಜಿಪಂ ಸಿಇಒ ಕೆ.ಜ್ಯೋತಿ ಜಾಥಾಗೆ ಚಾಲನೆ ನೀಡಿದರು. ಜಾಥಾವು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಕೆ.ಆರ್‌.ವೃತ್ತ, ಸಯ್ನಾಜಿರಾವ್‌ ರಸ್ತೆ ಮೂಲಕ ಪುರಭವನ ತಲುಪಿತು.

Advertisement

ಕಾರ್ಯಕ್ರಮದಲ್ಲಿ 18 ವರ್ಷ ತುಂಬಿದ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಇದೇ ಸಂದರ್ಭ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮತದಾನ ಅರಿವು ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಒಂದು ಮತದಿಂದ ಏನಾಗಬಹುದು?: ರಾಜ್ಯದಲ್ಲಿ ಯಾವುದೇ ಒಂದು ಸರ್ಕಾರ ಆಡಳಿತ ನಡೆಸಲು ಪ್ರತಿಯೊಬ್ಬರು ಮಾಡಿದ ಮತದಾನದಿಂದ ನಿರ್ಧಾರವಾಗಲಿದೆ. ಆದ್ದರಿಂದ ನಮ್ಮ ಒಂದೇ ಮತದಿಂದ ಏನಾಗಬಹುದು, ಒಂದೊಂದು ಬಾರಿ ಒಂದು ಮತದಿಂದ ಸೋಲನ್ನು ಅನುಭವಿಸಿರುವುದು ನಾವು ನೋಡಿದ್ದೇವೆ. ಸರ್ಕಾರ ರಚನೆಗೆ ಬಹುಮತ ದೊರೆಯದೇ ಇರಲು ಮತದಾನದಿಂದ ಆಗುತ್ತದೆ.

ಇದನ್ನೆಲ್ಲಾ ತಿಳಿದು ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ನ್ಯಾಯಾಧೀಶ ಎಸ್‌.ಕೆ. ಒಂಟಿಗೂಡಿ ತಿಳಿಸಿದರು. ಮತದಾನದ ಮಹತ್ವ ತಿಳಿದು ದೇಶದ ಯುವಕರು ಮತದಾನ ಮಾಡಲು ಮುಂದಾಗಬೇಕು. ಸೂಕ್ತ ವ್ಯಕ್ತಿಗೆ ಹಕ್ಕು ಚಲಾಯಿಸಿ ಉತ್ತಮ ಆಡಳಿತಕ್ಕೆ ಬುನಾದಿ ಹಾಕುವಂತೆ ಹೊಸದಾಗಿ ಮತ ಚಲಾಯಿಸಲಿರುವ ವಿದ್ಯಾರ್ಥಿಗಳಿಗೆೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next