Advertisement

ಅತೃಪ್ತರ ರಾಜೀನಾಮೆ ಹೈಡ್ರಾಮಾ: ಸ್ಪೀಕರ್ ನಿರ್ಧಾರದ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ!

10:42 AM Jul 10, 2019 | Nagendra Trasi |

ಬೆಂಗಳೂರು: ರಾಜ್ಯ ರಾಜಕೀಯದ ರಾಜೀನಾಮೆ ಪರ್ವದೊಂದಿಗೆ ಆಡಳಿತಾರೂಢ ಮೈತ್ರಿ ಸರ್ಕಾರ ಅಲ್ಪ ಬಹುಮತಕ್ಕೆ ಕುಸಿಯುವ ಮೂಲಕ ಬಹುಮತ ಕಳೆದುಕೊಂಡಿದ್ದು, ಇದೀಗ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಿದೆ. ಮತ್ತೊಂದೆಡೆ 14 ಶಾಸಕರು ನೀಡಿರುವ ರಾಜೀನಾಮೆ ಪತ್ರದ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಪ್ರಕಟಿಸುವ ನಿರ್ಧಾರದ ಮೇಲೆ ಇದೀಗ ಎಲ್ಲರ ಚಿತ್ತ ನಿಟ್ಟಿದೆ.

Advertisement

ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಸ್ವೀಕರಿಸುತ್ತಾರೋ, ತಿರಸ್ಕರಿಸುತ್ತಾರೋ ಅಥವಾ ಕಾನೂನಿನ ಅಸ್ತ್ರ ಪ್ರಯೋಗಿಸುತ್ತಾರೋ ಎಂಬ ನಡೆ ಮೇಲೆ ಮೈತ್ರಿ ಭವಿಷ್ಯ ನಿಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿರೀಕ್ಷೆಯಂತೆ ಮಂಗಳವಾರ ವಿಧಾನಸೌಧಕ್ಕೆ ಆಗಮಿಸಿ ರಾಜೀನಾಮೆ ಪತ್ರವನ್ನು ಪರಿಶೀಲಿಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರು. ಅದರಂತೆ ರಮೇಶ್ ಕುಮಾರ್ ಅವರು ಮಂಗಳವಾರ ಸ್ಪೀಕರ್ ಕಚೇರಿಗೆ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next