Advertisement

ನೂತನ ಅನುಭವ ಮಂಟಪಕ್ಕೆ ಜನವರಿಯಲ್ಲಿ ಅಡಿಗಲ್ಲು

11:15 PM Nov 18, 2019 | Team Udayavani |

ಬೀದರ: ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರದಿಂದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಜನವರಿಯಲ್ಲಿ ಅಡಿಗಲ್ಲು ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನುಭವ ಮಂಟಪ ಉತ್ಸವದ ವೇಳೆಯೇ ಕಾಮಗಾರಿಗೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ವಿನೂತನ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ಈಗಾಗಲೇ 50 ಕೋಟಿ ಮಂಜೂರು ಮಾಡಿದೆ.

Advertisement

ಸಂಶೋಧನೆಗಳ ಆಧಾರದ ಮೇಲೆಯೇ 1955ರಲ್ಲಿ ಲಿಂ. ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ನಿರ್ಮಿಸಿದ್ದಾರೆ. ಗೆಜೆಟ್‌ ಪ್ರಕಾರ ಮಂಟಪ ಒಟ್ಟು 80 ಎಕರೆ ಜಮೀನು ಹೊಂದಿತ್ತು. ಆದರೆ, ಅದು ಈಗ 25 ಎಕರೆಗೆ ಇಳಿದಿದೆ. ನೂತನ ಕಟ್ಟಡ ಟ್ರಸ್ಟ್‌ಗೆ ಸೇರಬಹುದೆಂಬ ಉದ್ದೇಶಕ್ಕೆ ಕೆಲವರು ಈ ಸ್ಥಳಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಜಮೀನು ಸಹ ಟ್ರಸ್ಟ್‌ ಹೆಸರಿನಲ್ಲಿಲ್ಲ. ಕೇವಲ ಕಬಾjದಲ್ಲಿದೆ. ನೂತನ ಕಟ್ಟಡಕ್ಕಾಗಿ ಟ್ರಸ್ಟ್‌ ಬೇಷರತ್ತಾಗಿ ಈ ಜಾಗವನ್ನು ಸರ್ಕಾರಕ್ಕೆ ಕೊಟ್ಟಿದೆ ಎಂದು ಡಾ.ಪಟ್ಟದ್ದೇವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next