Advertisement

ಕಟ್ಟಕಡೆ ವ್ಯಕ್ತಿಗೂ ಅರ್ಥವಾಗುವಂತೆ ವಚನ ರಚನೆ

10:07 PM May 07, 2019 | Lakshmi GovindaRaj |

ಎಚ್‌.ಡಿ.ಕೋಟೆ: ಕಟ್ಟಕಡೆಯ ವ್ಯಕ್ತಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿ ಆ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ, ವಿಶ್ವದಲ್ಲಿ ಭಾರತವನ್ನು ಮುನ್ನಡೆಗೆ ತಂದ ಕೀರ್ತಿ ಬಸವಣ್ಣ ನವರಿಗೆ ಸಲ್ಲುತ್ತದೆ ಎಂದು ಉಪತಹಶೀಲ್ದಾರ್‌ ಆನಂದ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಪಟ್ಟಣದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬಸವಣ್ಣನವರ 886 ನೇ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ತಾಂಡವವಾಡುತ್ತಿದ್ದ ಸಾಮಾಜಿಕ ಅಸಮಾನತೆ, ಮೌಡ್ಯ, ಕಂದಚಾರಗಳನ್ನು ಕಿತ್ತೂಗೆಯುವ ನಿಟ್ಟಿನಲ್ಲಿ ಬಸವಣ್ಣ ನವರು ಕ್ರಾಂತಿಕಾರಿ ಚಳವಳಿಯನ್ನು ಹುಟ್ಟು ಹಾಕಿದರು ಎಂದು ಸ್ಮರಿಸಿದರು.

ಕಾಯಕ ನಿಷ್ಠೆ: ಮಾನವಿಯತೆ ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿ ಸಮಾಜವನ್ನು ಸುಧಾರಣೆ ತಂದರು. ಶರಣು ಧರ್ಮದ ಪ್ರಸಾರ, ಕಾಯಕ ನಿಷ್ಠೆ, ಮಾನವತಾವಾದದಲ್ಲಿ ದೃಢ ವಿಶ್ವಾಸದಂತಹ ವಿಚಾರಗಳನ್ನು ವಚನಗಳ ಮೂಲಕ ಸಮಾಜದಲ್ಲಿ ಆಂದೋಲನ ಮೂಡಿಸಿ ಇಂದಿಗೂ ಸಮಾಜದ ಚಿಂತಕರಿಗೆ ದಾರಿದೀಪವಾಗಿ ಉಳಿದಿರುವವರು ಎಂದರೆ ಬಸವಣ್ಣ ಮಾತ್ರ. ಅವರು ರಚಿಸಿದ ವಚನಗಳು ಎಲ್ಲಿಯರೆಗೆ ಇರುತ್ತವೆಯೇ ಅಲ್ಲಿಯವರೆಗೂ ಅವರು ನಮ್ಮೊಳಗೆ ಇರುತ್ತಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದರು.

ಕಾಯಕದ ಮಹತ್ವ: ಕ್ಷೇತ್ರ ಶಿಕ್ಷಣಾಧಿಕಾರಿ ಸುಂದರ್‌ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿ ಸಮಾಜಕ್ಕೆ ತನ್ನದೆ ಆದ ಕೊಡುಗೆಯನ್ನು ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ನೀಡಿ ಸಮಾಜ ಪರಿವರ್ತನೆ ಕಾರಣರಾದವರು ಬಸವಣ್ಣನವರು. ನಾವೆಲ್ಲರೂ ಕಾಯಕದ ಮಹತ್ವವನ್ನು ಅರಿಯಬೇಕು, ಆತ್ಮವಲೋಕನ ಮಾಡಿಕೊಂಡು ಕೆಲಸ ಮಾಡಬೇಕು. ಅದರಲ್ಲೂ ಸರ್ಕಾರಿ ನೌಕರರು ಬಸವಣ್ಣನವರನ್ನು ಸ್ಫೂರ್ತಿಯಾಗಿ ತೆಗುದುಕೊಂಡು ಕೆಲಸ ನಿರ್ವಹಿಸಿಬೇಕು ಕಿವಿಮಾತು ಹೇಳಿದರು.

ಅನುಭವ ಮಂಟಪ: ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಬಸವಣ್ಣ ಅವರು 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಸರಳವಾದ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು. ನಾವು ಸಮಾಜ ಸುಧಾರಕರ ಅನುಭವವನ್ನು ಮುಂದುವರಿಸಿಕೊಂಡು ಹೋಗಿದ್ದೇ ಆದಲ್ಲಿ ಸುಖೀ ಕಲ್ಯಾಣ ರಾಜ್ಯ ನಿರ್ಮಾಣ ಮಾಡಲು ಸಾಧ್ಯ ಎಂದರು.

Advertisement

ಕಾರ್ಯಕ್ರಮದಲ್ಲಿ ಆದಿಕರ್ನಾಟಕ ಮಹಾಸಭದ ತಾಲೂಕು ಅಧ್ಯಕ್ಷ ಮುದ್ದಮಲ್ಲಯ್ಯ, ಹೊಸಹಳ್ಳಿ ಬಿ.ವಿ. ಬಸವರಾಜು, ಮೊತ್ತ ಬಸವರಾಜಪ್ಪ, ವೈ.ಟಿ.ಮಹೇಶ್‌, ಜಕ್ಕಹಳ್ಳಿ ಮಹದೇವಪ್ರಸಾದ್‌, ಮನುಗನಹಳ್ಳಿ ಮಾದಪ್ಪ, ಭೀಮನಹಳ್ಳಿ ಸೊಮೇಶ್‌, ಚೌಡಹಳ್ಳಿ ಜವರಯ್ಯ, ಮಹದೇವಪ್ರಸಾದ್‌, ತಾಪಂ ಇಒ ದರ್ಶನ್‌, ಡಾ.ಭಾಸ್ಕರ್‌, ಸಮಾಜ ಕಲ್ಯಾಣ ಇಲಾಖೆ ಸಹಯಕ ನಿರ್ದೇಶಕ ಗೋಪಾಲಕೃಷ್ಣಮೂರ್ತಿ, ಉಪತಹಶೀಲ್ದಾರ್‌ ಪುಟ್ಟಸ್ವಾಮಿ, ಶಿಕ್ಷಣ ಸಂಯೋಜಕ ಮಹದೇವಯ್ಯ, ವೇದಕುಮಾರ್‌, ರವಿಚಂದ್ರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next