Advertisement

ಬಿಡಿ ಭಾಗ ತಯಾರಿಕಾ ಘಟಕಕ್ಕೆ ಬೆಂಕಿ

12:14 PM Apr 11, 2018 | Team Udayavani |

ಮಹದೇವಪುರ: ಜೆಸಿಬಿ ಯಂತ್ರದ ಬಿಡಿ ಭಾಗ ತಯಾರಿಸುತ್ತಿದ್ದ ಕಂಪನಿಗೆ ಬೆಂಕಿ ತಗುಲಿ ಸುಮಾರು 20 ಲಕ್ಷ ರೂ. ವಸ್ತುಗಳು ಭಸ್ಮವಾಗಿರುವ ಘಟನೆ ಆವಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಚೀಮಸಂದ್ರ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ ಎಂಬುವರಿಗೆ ಸೇರಿದ್ದ ಪೈಕಾಂ ಎಂಜಿನಿಯರಿಂಗ್‌ ಪ್ರ„ವೇಟ್‌ ಲಿಮಿಟೆಡ್‌ನ‌ಲ್ಲಿ ಜೆಸಿಬಿ ಯಂತ್ರದ ಪೈಬರ್‌ ಬಿಡಿ ಭಾಗಗಳನ್ನು ತಯಾರಿಸಲಾಗುತ್ತಿತ್ತು.

Advertisement

ಕಂಪನಿಗೆ ಮತ್ತೂಂದೆಡೆಗೆ ಸ್ಥಳಾಂತರ ಮಾಡುವ ಸಲುವಾಗಿ ವಸ್ತುಗಳನ್ನು ತೆಗೆಯುವ ವೇಳೆ ವೆಲ್ಡಿಂಗ್‌ ಕಟರ್‌ ಸಹಾಯದಿಂದ ಕಬ್ಬಿಣದ ಪೈಪ್‌ ಕಟ್‌ ಮಾಡುವಾಗ ಬೆಂಕಿಯ ಕಿಡಿ ಪೈಬರ್‌ ವಸ್ತುಗಳಿಗೆ ತಾಗಿ ಪಕ್ಕದಲ್ಲೇ ಇದ್ದ ರಾಸಾಯನಿಕ ವಸ್ತುಗಳಿಗೆ ಹರಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕಾಗಮಿಸಿದ ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next