Advertisement

ಗೋದಾಮಿಗೆ ಬೆಂಕಿ ಯುವಕ ಸಾವು

12:37 PM Mar 21, 2018 | Team Udayavani |

ಬೆಂಗಳೂರು: ಶಾರ್ಟ್‌ ಸರ್ಕಿಟ್‌ನಿಂದ ಗುಜರಿ ಗೋಡಾನ್‌ಲ್ಲಿ ಹೊತ್ತಿಕೊಂಡ ಬೆಂಕಿ ಪಕ್ಕದ ಕಟ್ಟಡಕ್ಕೂ ವ್ಯಾಪಿಸಿ ಯುವಕನೊಬ್ಬ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶಾಮಣ್ಣ ಗಾರ್ಡ್‌ನಲ್ಲಿ ನಡೆದಿದೆ. ಖಲೀಂ (24) ಮೃತ ಯುವಕ.

Advertisement

ಮೆಹಬೂಬ್‌ ಎಂಬುವವರಿಗೆ ಸೇರಿದ ಗುಜರಿ ಗೋದಾಮಿನಲ್ಲಿ ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನಲ್ಲಿದ್ದ ಅನುಪಯುಕ್ತ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಪಕ್ಕದಲ್ಲಿದ್ದ  ಇದ್ದ ಖಲೀಂ ಅವರ ಮನೆಗೂ ವ್ಯಾಪಿಸಿದೆ. ಈ ವೇಳೆ, ಕೊಠಡಿಯಲ್ಲಿ ಒಬ್ಬನೇ ಮಲಗಿದ್ದ ಖಲೀಂ ಹೊಗೆಗೆ ಉಸಿರುಕಟ್ಟಿ, ಬೆಂಕಿ ತಾಕಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಖಲೀಂ ಕೊಠಡಿಯಲ್ಲಿ ಮಲಗಿದ್ದರಿಂದ ಯಾರ ಗಮನಕ್ಕೂ ಬಂದಿಲ್ಲ. ಘಟನೆ ಸಂಬಂಧ ಈಗಾಗಲೇ ಗುಜರಿ ಗೋದಾಮು ಮಾಲೀಕ ಮೆಹಬೂಬ್‌ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next