Advertisement

ಚಿತ್ರ ಸಾಹಿತಿ ಕವಿರಾಜ್‌ಗೆ ಪಿತೃ ವಿಯೋಗ‌

10:57 PM Oct 15, 2019 | Lakshmi GovindaRaju |

ಹೊಸನಗರ: ಚಿತ್ರರಂಗದ ಖ್ಯಾತ ಚಿತ್ರ ಸಾಹಿತಿ ಯಡೂರು ಕವಿರಾಜ್‌ ಅವರ ತಂದೆ ಹರಿಯಪ್ಪ ನಾಯ್ಕ (68) ಮಂಡಗದ್ದೆ ಹೋಬಳಿ ಇರುವತ್ತಿ ಗ್ರಾಮದ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾದರು. ಹರಿಯಪ್ಪ ನಾಯ್ಕ ಅವರು ಕಳೆದ ಕೆಲ ದಿನದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

Advertisement

ಹೊಸನಗರ ತಾಲೂಕಿನ ಯಡೂರು ಸಮೀಪದ ಹೆಂಬ್ಡೇಬೈಲಿನಲ್ಲಿ ವಾಸವಾಗಿದ್ದ ಹರಿಯಪ್ಪ ನಾಯ್ಕ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ನಿಕಟವರ್ತಿಯಾಗಿದ್ದರು. ಸಮಾಜವಾದಿ ನೆಲೆಯಿಂದ ಬಂದ ಅವರು, ತಾಲೂಕಿನ ಬಗರ್‌ಹುಕುಂ ಹೋರಾಟದಲ್ಲಿ ಸಕ್ರಿಯರಾಗಿದ್ದರು.

ಮೃತರು ಪತ್ನಿ, ಪುತ್ರ ಕವಿರಾಜ್‌, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧು- ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಡಗದ್ದೆ ಹೋಬಳಿಯ ಇರುವತ್ತಿಯಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next