Advertisement

ಗಂಜಿಮಠ: ಸ್ಲಾಬ್ ಮುರಿದು ಪೆಟ್ರೊಲ್ ಪಂಪ್ ಬಾವಿಗೆ ಬಿದ್ದ ಕಾರ್ಮಿಕ ಸಾವು

02:33 PM Jul 16, 2019 | Team Udayavani |

ಗಂಜಿಮಠ: ಇಲ್ಲಿನ ಸ್ಥಳಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಪಂಪ್ ನ ಬಾವಿಯ ಸ್ಲಾಬ್ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ.

Advertisement

ಸಿದ್ದಕಟ್ಟೆ ನಿವಾಸಿ ವೆಂಕಪ್ಪ (40ವ) ಮೃತಪಟ್ಟ ದುರ್ದೈವಿ. ಅಶೋಕ್ ಶೇಟ್ ಎಂಬವರು ಗಾಯಗೊಂಡಿದ್ದಾರೆ.

ಗಂಜಿಮಠದ ಬಲ್ಲಾಳ್ ಟೈಲ್ಸ್ ಬಳಿಯ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಬಾವಿಯ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಸ್ಲಾಬ್ ಕೆಲಸ ಮಾಡುವ ಸಮಯದಲ್ಲಿ ಒಮ್ಮೆ ಹಾಕಲಾಗಿದ್ದ ಸ್ಲಾಬ್ ಮುರಿದು ಇಬ್ಬರು ಕಾರ್ಮಿಕರು ಬಾವಿಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ .

ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next