Advertisement
ಕೆಆರ್ಎಸ್ ಅಣೆಕಟ್ಟೆಯನ್ನು ಚಾವಣಿ ವಲಯ (ವಾಲ್ಟ್ ಝೋನ್) ಅಂದರೆ, ಭೂಕಂಪನ ವಲಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಯಾವುದೇ ಯೋಜನೆ ಕೈಗೊಳ್ಳುವುದಕ್ಕೂ ಮುಂಚೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ, ಸಲಹೆ ಅಗತ್ಯವಿದೆ. ಜೊತೆಗೆ, ಭಾರತೀಯ ಭೌಗೋಳಿಕ ಸರ್ವೆ ಇಲಾಖೆಯ ಅನುಮತಿಯೂ ಕಡ್ಡಾಯವಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಜಲಾಶಯ ಈಗಾಗಲೇ ಕಾವೇರಿ ನೀರು ನಿರ್ವಹಣಾ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದೆ. ಕೇಂದ್ರ ನೀರಾವರಿ ಇಲಾಖೆಯ ಅನುಮತಿಯೂ ಕಾವೇರಿ ಪ್ರತಿಮೆಗೆ ಅತ್ಯವಶ್ಯವಾಗಿದೆ.
ಜನರನ್ನು ಆಕರ್ಷಿಸುವ ಯೋಜನೆಯನ್ನು ರೂಪಿಸಬಾರದು ಎಂದು ಸಲಹೆ ರವಾನಿಸಿದೆ. ಈ ಎಲ್ಲಾ ಅಂಶಗಳನ್ನು ಕಡೆಗಣಿಸಿ, ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿಲುವಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದೊಂದು ಜನಾಂದೋಲನವಾಗಿ ರೂಪುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
Related Articles
ನರ್ಮದಾ ನದಿ ತೀರದಲ್ಲಿ ಐಕ್ಯತೆಯ ಪ್ರತೀಕವಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ನಿರ್ಮಿಸಿದ ಮಾದರಿಯಲ್ಲೇ
ರಾಜ್ಯ ಸರ್ಕಾರ ಕೆಆರ್ಎಸ್ ಬೃಂದಾವನ ಉದ್ಯಾನದಲ್ಲಿ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಪ್ರತಿಮೆಗೆ ಐಫೆಲ್ ಟವರ್ನ ರೂಪ ನೀಡಲಾಗುವುದು. ಎಲಿವೇಟರ್ ಮೂಲಕ ಪ್ರವಾಸಿಗರನ್ನು ಪ್ರತಿಮೆಯ ಹಂತಕ್ಕೆ ಕರೆದೊಯ್ದು ಸುತ್ತಲಿನ ರಮಣೀಯ ದೃಶ್ಯಾವಳಿ ಹಾಗೂ ಪ್ರತಿಮೆಯ ಮೇಲಿಂದ ನೀರು ಕೆಳಕ್ಕೆ ಬೀಳುವ ಅಪೂರ್ವ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುವಂತೆ
ಯೋಜನೆ ರೂಪಿಸಲಾಗಿದೆ. ಮ್ಯೂಸಿಯಂ ಕಾಂಪ್ಲೆಕ್ಸ್ ಹಾಗೂ ಅಕ್ಷಿಪಟಲ ಮಾದರಿಯ ಎರಡು ಗಾಜಿನ ಟವರ್ಗಳಿಂದ ಕೆಆರ್ಎಸ್ ಜಲಾಶಯದ ಸೌಂದರ್ಯ ವೀಕ್ಷಣೆಗೆ ಅವಕಾಶ ವನ್ನು ನೀಡಲಾಗುವುದು. ಈ ಯೋಜನೆಯ ಅಂದಾಜು ವೆಚ್ಚ 1,200 ಕೋಟಿ ರೂ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕಾವೇರಿ ಮೇಲೆ ಅಭಿಮಾನವಿದ್ದರೆ ಕೆಆರ್ಎಸ್ ಅಣೆಕಟ್ಟೆಯಿಂದ ದೂರ ಪ್ರತಿಮೆ ನಿರ್ಮಾಣ ಮಾಡಲಿ. ಕೆಆರ್ಎಸ್ ಬುಡದಲ್ಲೇ ಮಾಡಲುದ್ದೇಶಿಸಿರುವ
ಯೋಜನೆ ಮೂರ್ಖತನದ್ದು. ಮೂರ್ತಿ ಸ್ಥಾಪಿಸಲು ಅಸ್ಥಿಭಾರಕ್ಕೆ ಬಂಡೆಗಳನ್ನು ಒಡೆಯಬೇಕು. ಸ್ಫೋಟಕಗಳನ್ನು ಸಿಡಿಸದೆ
ಬಂಡೆಗಳನ್ನು ಒಡೆಯಲಾಗದು. ಅದರಿಂದ ಅಣೆಕಟ್ಟೆಗೆ ಅಪಾಯವಾಗುವುದು ಖಚಿತ.
● ಎಂ.ಲಕ್ಷ್ಮಣ್, ಕಾವೇರಿ ತಾಂತ್ರಿಕ ಸಲಹಾ ಸಮಿತಿ.
Advertisement
ಇದು ಜನಸಾಮಾನ್ಯರ ಬೇಡಿಕೆಯಲ್ಲ. ಇದಕ್ಕೆ ತಗಲುವ ವೆಚ್ಚವನ್ನು ಕಾವೇರಿ ಕಣಿವೆ ಪ್ರದೇಶದ ಕೆರೆಗಳನ್ನು ತುಂಬಿಸಲು ಬಳಸಲಿ. ತಮಿಳುನಾಡಿಗೆ ವ್ಯರ್ಥವಾಗಿ ಹರಿಯುವ ನೀರನ್ನು ಹಿಡಿದಿಡುವುದರಿಂದ ಅಂತರ್ಜಲ ವೃದಿಟಛಿಯಾಗುತ್ತದೆ. ಒಳಚರಂಡಿ ನೀರು ಸೇರಿ ಮಲಿನಗೊಳ್ಳುತ್ತಿರುವ ಕಾವೇರಿಯನ್ನು ಶುದ್ಧಿಕರಣಗೊಳಿಸಲು ಯೋಜನೆಗಳು ರೂಪುಗೊಳ್ಳಬೇಕು.● ಪ್ರೊ.ಹೆಚ್.ಟಿ.ಬಸವರಾಜಪ್ಪ, ಅರ್ಥ್ಸೈನ್ಸ್ ವಿಭಾಗದ ಮುಖ್ಯಸ್ಥರು, ಮಾನಸಗಂಗೋತ್ರಿ ಮಂಡ್ಯ ಮಂಜುನಾಥ್