Advertisement

ಮಣ್ಣು ಕುಸಿದು ಮೂವರು ಕಾರ್ಮಿಕರ ದುರ್ಮರಣ

02:37 AM May 28, 2019 | Sriram |

ಬೆಳಗಾವಿ: ಗೋವಾ-ಬೆಳಗಾವಿ ಮಹಾ ಮಾರ್ಗದಲ್ಲಿ ರಸ್ತೆ ಕಾಮಗಾರಿ ವೇಳೆ ಬ್ರಿಜ್‌ ನಿರ್ಮಾಣ ಮಾಡುತ್ತಿದ್ದಾಗ ಮಣ್ಣು ಕುಸಿದು ಜಾರ್ಖಂಡ್‌ ಮೂಲದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ತಾಲೂಕಿನ ದೇಸೂರ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಜಾರ್ಖಂಡ್‌ ಮೂಲದ ಅರ್ಜುನ ಸಿಂಗ್‌(36), ದುರ್ಗೇಶ ಕುಮಾರ(26) ಹಾಗೂ ಸುಖಾನ್‌ ರಾಮ(25) ಮೃತಪಟ್ಟವರು.

ಸೇತುವೆ ನಿರ್ಮಾಣ ಮಾಡುವಾಗ ಕೆಳ ಭಾಗದಲ್ಲಿ ಕೆಲಸದಲ್ಲಿ ನಿರತ ರಾಗಿದ್ದ ಇವರ ಮೇಲೆ ಏಕಾಏಕಿ ಮಣ್ಣು ಕುಸಿದಿದೆ. ಮಣ್ಣಿನ ಕೆಳ ಭಾಗದಲ್ಲಿ ಸಿಲುಕಿಕೊಂಡ ಇವರು ಉಸಿರುಗಟ್ಟಿ ಅಸುನೀ ಗಿದ್ದಾರೆ. ಮಣ್ಣಿನ ಗುಡ್ಡೆ ಕುಸಿಯುತ್ತಿದ್ದಂತೆ ಮೂವರು ಮಣ್ಣಿನಡಿ ಸಿಕ್ಕಿ ಹಾಕಿಕೊಂಡಿದ್ದರು. ಕೂಡಲೇ ಜೆಸಿಬಿಯಿಂದ ಮಣ್ಣು ತೆಗೆದು ಇಬ್ಬರ ಮೃತದೇಹಗಳನ್ನು ಹೊರ ತೆಗೆಯಲಾಯಿತು. ನಂತರ ಇನ್ನೊಬ್ಬ ಕಾರ್ಮಿಕನ ಶವ ಹೊರ ತೆಗೆಯಲಾಯಿತು. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next