Advertisement

ಕಳಸ ಬಳಿ ಮತ್ತೆ ಧರೆ ಕುಸಿತ

06:50 AM Aug 27, 2018 | |

ಚಿಕ್ಕಮಗಳೂರು: ಮಲೆನಾಡು ಪ್ರದೇಶಗಳಲ್ಲಿ ಧರೆ ಕುಸಿತ ಪ್ರಕರಣಗಳು ಹೆಚ್ಚುತ್ತಿದ್ದು, ಭಾನುವಾರ ಮೂಡಿಗೆರೆ ತಾಲೂಕು ಕಳಸ ಸಮೀಪ ಮತ್ತೂಂದು ಧರೆ ಕುಸಿದಿದೆ. ಕಳಸ ಸಮೀಪದ ತಲಗೋಡು, ಕಚ್ಚುಕುಡಿಗೆ ಎಂಬಲ್ಲಿ ಧರೆ ಕುಸಿತವಾಗಿದೆ. 

Advertisement

ಧರೆ ಕುಸಿದು ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳಕ್ಕೆ ಮಣ್ಣು ಬಿದ್ದು ಕೊನೆಗೆ ಹಳ್ಳದ ನೀರು ಅಡಕೆ ತೋಟಕ್ಕೆ ನುಗ್ಗಿದೆ. ಸುಧಾಕರ್‌ ಎಂಬುವವರ ತೋಟಕ್ಕೆ ಮಣ್ಣು, ನೀರು ನುಗ್ಗಿದ್ದರಿಂದ ನೂರಾರು ಅಡಕೆ ಮರಗಳು ನೆಲಕ್ಕೆ ಬಾಗಿವೆ. ಮಲೆನಾಡು ಭಾಗದಲ್ಲಿ ಗುಡ್ಡಕುಸಿತ,ಭೂಮಿ ಬಿರುಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನತೆ ತೀವ್ರ ಭಯದಿಂದ ಜೀವನ ನಡೆಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next