Advertisement
ಇವುಗಳ ನಡುವೆ ಕಳೆದ ಆರೇಳು ತಿಂಗಳುಗಳಿಂದಲೂ ನಗರಸಭೆಗೆ ಖಾಯಂ ಪೌರಾಯುಕ್ತರು ಇಲ್ಲದೇ ಮೂರು ನಾಲ್ಕು ಬಾರಿ ಬದಲಾವಣೆಗಳು ಆಗುತ್ತಿದೆ. ಇದು ಸಾಲದೆಂಬಂತೆ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಪ್ರಹಸನವೂ ನಡೆದು ನಗರಸಭೆಯ ಸಂಪೂರ್ಣ ಬಂದ್ ಆಗುವಂತಾಗಿಬಿಟ್ಟಿದೆ.
Related Articles
ಒಳಚರಂಡಿ ನಿರ್ವಹಣೆಯಲ್ಲಿ ಸಂಪೂರ್ಣ ಸೋತಿರುವ ನಗರಸಭೆ ಕೆಟ್ಟು ನಿಂತಿರುವ ಸಕ್ಕಿಂಗ್ ಯಂತ್ರವನ್ನು ದುರಸ್ತಿಪಡಿಸಲಾಗದ ಸ್ಥಿತಿಯಲ್ಲಿದೆ. ಸಕ್ಕಿಂಗ್ ವಾಹನಗಳ ಕೊರತೆ, ಇರುವ ವಾಹನಕ್ಕೆ ಸಿಬ್ಬಂದಿ ಕೊರತೆ ಇರುವುದರಿಂದ ಒಳಚರಂಡಿ ದೂರುಗಳಿಗೆ ಸ್ಪಂದಿಸಲಾಗುತ್ತಿಲ್ಲ. ಇದರಿಂದ ನಗರದ ಅರ್ಧಭಾಗದಷ್ಟು ಒಳಚರಂಡಿ ಬ್ಲಾಕ್ ಆಗುವ ಸಮಸ್ಯೆಯಿಂದ ನಾಗರಿಕರಿಗೆ ಕಿರಿಕಿರಿಯನ್ನುಂಟು ಮಾಡಿದೆ.
Advertisement
ಕೋಲಾರ ನಗರಸಭೆಯಲ್ಲಿ ಕಸ ವಿಲೇವಾರಿ ಮತ್ತೂಂದು ಬೃಹದಾಕಾರದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕಸ ಹಾಕಲು ಜಾಗವಿಲ್ಲವೆಂಬ ಸಬೂಬು ಹೇಳಿಕೊಂಡು ಸ್ವತ್ಛತೆ ಮರೆತ್ತಿದ್ದ ನಗರಸಭೆಗೆ ಹಿಂದಿನ ಜಿಲ್ಲಾಧಿಕಾರಿ ಸತ್ಯವತಿ ಜಾಗಹುಡುಕಿಕೊಟ್ಟಿದ್ದರು. ಆದರೆ, ಇರುವ ಪೌರಕಾರ್ಮಿಕರಿಂದ ಕೆಲಸ ತೆಗೆಸಿ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲಾಗದ ನಗರಸಭೆಯಿಂದ ಇಡೀ ನಗರಸ ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ. ಮಳೆಗಾಲದಲ್ಲಿ ನಗರದ ಎಲ್ಲಾ ಚರಂಡಿಗಳನ್ನು ಸ್ವತ್ಛತಾ ಆಂದೋಲದ ಮಾದರಿಯಲ್ಲಿ ಒಮ್ಮೆ ಸ್ವತ್ಛಗೊಳಿಸಿದರೆ ಮಳೆ ನೀರು ಸರಾಗವಾಗಿ ಹರಿದು ಕೆರೆ ಸೇರುತ್ತದೆ. ಅಪಾಯಗಳು ಕಡಿಮೆಯಾಗುತ್ತದೆ. ಆದರೆ, ಚರಂಡಿಗಳ ಸ್ವತ್ಛತೆಯನ್ನೇ ಮರೆತ ನಗರಸಭೆಯಿಂದ ತುಂತುರು ಹನಿಗಳು ಬಿದ್ದರೂ ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಡುತ್ತಿದ್ದು, ಕಸ ರಸ್ತೆ ಮೇಲೆ ನಿಲ್ಲುವಂತಾಗಿದೆ. ಹಿಂದಿನ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹೊಂದಾಣಿಕೆಯಿಂದ ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಂದಲೇ ಉತ್ತಮ ಆಡಳಿತ ನೀಡುತ್ತಿತ್ತು. ಆದರೆ, ಈಗ ಪೌರಕಾರ್ಮಿಕರ ಕೊರತೆ, ಯಂತ್ರೋಪಕರಣ ದುರಸ್ತಿ, ಎಂಜಿನಿಯರ್ ಗಳ ಕೊರತೆ, ಆಯುಕ್ತರಿಲ್ಲ ಇತ್ಯಾದಿ ನೆಪ ಸಬೂಬುಗಳ ನಡುವೆ ನಾಗರೀಕ ಸೇವೆ ನೇಪಥ್ಯಕ್ಕೆ
ಸರಿಯುವಂತಾಗಿದೆ. ನಗರಸಭೆಯಲ್ಲಿ ಒಟ್ಟು 418 ಅನುಮೋದಿತ ಹುದ್ದೆಗಳಿದ್ದು, ಈ ಪೈಕಿ ಕೇವಲ 111 ಖಾಯಂ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ದಿನಗೂಲಿ, ಹೊರಗುತ್ತಿಗೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಲೆಕ್ಕದಲ್ಲಿ 142 ಮಂದಿ
ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 165 ಹುದ್ದೆಗಳು ಖಾಲಿ ಇವೆ.
ಅವಿಶ್ವಾಸದ ಪ್ರಹಸನ: ಕೋಲಾರ ನಗರಸಭೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇವುಗಳನ್ನು ಜವಾಬ್ದಾರಿಯಿಂದ ನಿಬಾಯಿಸಬೇಕಾದ ಆಡಳಿತ ಮಂಡಳಿ ಪುರಪಿತೃಗಳು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಪ್ರಹಸನ ನಡೆಸಿ ಟೀಕೆಗೆ ಗುರಿಯಾಗಿದ್ದಾರೆ. ಅಂತಿಮವಾಗಿ ಅವಿಶ್ವಾಸವನ್ನು ಮಂಡಿಸಲಾಗದೆ ಸ್ವಾರ್ಥ ಸಾಧನೆ ಮಾಡಿಕೊಂಡಿದ್ದಾರೆ. ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿದ್ದ ಕೆಲವು ಸದಸ್ಯರು ಜೇಬು ತುಂಬಿಸಿಕೊಂಡು, ಪ್ರವಾಸ ಭಾಗ್ಯ ಅನುಭವಿಸಿ ತೆಪ್ಪಗಾಗಿದ್ದಾರೆ. ನಾಗರಿಕರ ಆಕ್ರೋಶ: ನಗರಸಭೆಯ ಅಧ್ವಾನದ ಆಡಳಿತ ಕುರಿತಂತೆ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರಿಕರು, ಇನ್ನುಳಿದ ಆರೇಳು ತಿಂಗಳುಗಳ ಆಡಳಿತವನ್ನು ಸಹಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ನಡುವೆಯೂ ಕೆಲವು ನಾಗರಿಕರು ನಗರಸಭೆ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ನಗರಸಭೆ ಕಂಪ್ಯೂಟರ್
ಪೀಠೊಪಕರಣಗಳು ಧ್ವಂಸಗೊಳಿಸಲಾಗಿದೆ. ಆರೇಳು ತಿಂಗಳ ನಂತರ ಎದುರಾಗುವ ಚುನಾವಣೆಯಲ್ಲಾದರೂ ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ಇರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನತೆ ಕಾಯುವಂತಾಗಿದೆ. ಆಯುಕ್ತರ ಬದಲಾವಣೆ ಆಟ ಆರೇಳು ತಿಂಗಳ ಹಿಂದೆ ಆಯುಕ್ತರಾಗಿದ್ದ ರಾಮಪ್ರಕಾಶ್ ಅನಧಿಕೃತ ಟ್ಯಾಂಕರ್ಗಳಿಗೆ ಕಡಿವಾಣ ಹಾಕಿದರೆಂಬ ಕಾರಣಕ್ಕಾಗಿ ಅವರನ್ನು ಬದಲಾಯಿಸಲು ನಗರಸಭಾ ಸದಸ್ಯರೇ ಮುಂದಾಗಿದ್ದರು.
ಆನಂತರ ವಿಧಾನಸಭಾ ಚುನಾವಣೆ ಸಮಯದಿಂದಲೂ ಕೋಲಾರ ನಗರಸಭೆಗೆ ರಾಮಪ್ರಕಾಶ್, ಶ್ರೀಕಾಂತ್, ರಾಮಪ್ರಕಾಶ್, ಸತ್ಯನಾರಾಯಣ, ರಾಮಪ್ರಕಾಶ್ ಎಂಬಂತೆ ಬದಲಾವಣೆಯಾಗುತ್ತಲೇ ಇದೆ. ಸೆ.18 ಬುಧವಾರ ಸರಕಾರದ ಆದೇಶದ ಮೇರೆಗೆ ರಾಮಪ್ರಕಾಶ್ ಪೌರಾಯುಕ್ತರಾಗಿ ಅಧಿಕಾರ ಸ್ಪೀಕರಿಸಿದ ಬೆನ್ನಲ್ಲೇ ಮಧ್ಯಾಹ್ನದ ವೇಳೆಗೆ ರಾಮಪ್ರಕಾಶ್ ವರ್ಗಾವಣೆಗೆ ನ್ಯಾಯಾಲಯದಿಂದ ತಡೆ ಸಿಕ್ಕಿದೆಯೆಂಬ ವರ್ತಮಾನಗಳು ಬಂದಿದ್ದು, ಮತ್ತೆ ಸತ್ಯನಾರಾಯಣ ಮುಂದುವರಿಸುವ ಸಾಧ್ಯತೆಗಳಿವೆ. ಆಯುಕ್ತರ ಈ ಬದಲಾವಣೆ ಆಟದಲ್ಲಿ ನಗರಸಭೆ ಅಭಿವೃದ್ಧಿ ಕುಂಠಿತಗೊಂಡಿದೆ. ಸರಕಾರದ ಆದೇಶದ ಮೇಲೆ ಬುಧವಾರ ಪೌರಾಯುಕ್ತರಾಗಿ ನೇಮಕಗೊಂಡೆ, ಸಂಜೆ ವೇಳೆಗೆ ಹಿಂದಿನ ಪೌರಾಯುಕ್ತರು
ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆಂಬ ಮಾಹಿತಿ ಬಂದಿದೆ. ಇದರ ನಿರೀಕ್ಷೆಯಲ್ಲಿರುವ ತಾವು ನಗರಸಭೆ ಅಭಿವೃದ್ಧಿ ಕುರಿತು ಮಾತನಾಡುವುದಿಲ್ಲ. ನಗರಸಭೆಯ ಈ ಸ್ಥಿತಿಗೆ ಏನು ಕಾರಣ ಎನ್ನುವುದನ್ನು ಕೋಲಾರದ ಜನತೆಯೇ ಅರ್ಥ ಮಾಡಿಕೊಳ್ಳಬೇಕಾಗಿದೆ.
ರಾಮಪ್ರಕಾಶ್, ಪೌರಾಯುಕ್ತರು ಕೋಲಾರ ನಗರಸಭೆಯಲ್ಲಿ ಸೌಲಭ್ಯಗಳ ಕೊರತೆಗಳ ನಡುವೆಯೂ ಮೂಲಭೂತ ಸೇವೆಗಳನ್ನು ಒದಗಿಸಲು ಸಾಧ್ಯವಿದೆ. ಹಿಂದಿನ ಅಧ್ಯಕ್ಷರು ಇದನ್ನು ನಿರೂಪಿಸಿದ್ದಾರೆ. ಆದರೆ, ಈಗ ಆಡಳಿತಾತ್ಮಕ ಸಮಸ್ಯೆಗಳು ಮತ್ತು ಸಿಬ್ಬಂದಿ
ಅಧಿಕಾರಿಗಳ ಕೊರತೆಯಿಂದಾಗಿ ನಾಗರಿಕ ಸೇವಾ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ.
ಗಾಂಧಿನಗರ ನಾರಾಯಣಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಗಣೇಶ್