Advertisement

ಭಜರಂಗದಳ ಸಂಚಾಲಕ ಆಗುವ ಆಸೆ ಇತ್ತು: ಕಟೀಲ್‌

11:05 PM Sep 16, 2019 | Team Udayavani |

ಚಿತ್ರದುರ್ಗ: “ಭಜರಂಗದಳ ರಾಜ್ಯ ಸಂಚಾಲಕನಾಗುವ ಆಸೆ ಇತ್ತು. ಆದರೆ ಸಂಘದ ಹಿರಿಯರು ಬಿಜೆಪಿಗೆ ಹೋಗಬೇಕೆಂದು ಸೂಚನೆ ನೀಡಿದರು..’ ಹೀಗೆಂದವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌. ಸೋಮವಾರ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ಎಂಪಿ-ಎಂಎಲ್‌ಎ, ರಾಜಕಾರಣ ನನಗೆ ಇಷ್ಟವಿರಲಿಲ್ಲ. ಉಗ್ರ ಭಾಷಣ ಮಾಡಬೇಕು, ಹೋರಾಟ ಮಾಡಬೇಕು ಎನ್ನುವುದಷ್ಟೇ ನನ್ನ ಆಯ್ಕೆಯಾಗಿತ್ತು.

Advertisement

ಭಾಷಣ ಮಾಡಿ ಚಪ್ಪಾಳೆ ತಟ್ಟಿಸಿಕೊಳ್ಳದಿದ್ದರೆ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೀಗೆ ಸಂಘಟನೆಗೆ ಬಂದವನು ಇಂದು ಬಿಜೆಪಿ ರಾಜ್ಯಾಧ್ಯಕ್ಷನಾದೆ ಎಂದರು. ಉಡುಪಿ ಜಿಲ್ಲೆಯ ಕಾರ್ಕಳದ ಶಾಸಕ ಸುನೀಲ್‌ಕುಮಾರ್‌ ಭಜರಂಗದಳ ಸಂಚಾಲಕರಾಗಿದ್ದರು. ಆಗ ಸಂಘದ ಹಿರಿಯರು ನನ್ನನ್ನು ಕರೆದು ಬಿಜೆಪಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಿದ್ದರು. ಆದರೆ ನಾನು ಭಜರಂಗ ದಳಕ್ಕೆ ಹೋಗುವುದಾಗಿ ಹೇಳಿದ್ದೆ. ಒಬ್ಬ ಸಾಮಾನ್ಯ ಕಾರ್ಯ ಕರ್ತ ಪಕ್ಷದ ರಾಜ್ಯಾಧ್ಯಕ್ಷನಾಗುವ ಸಾಧ್ಯತೆ ಇರುವುದು ಬಿಜೆಪಿಯಲ್ಲಿ ಮಾತ್ರ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next