Advertisement

Mysore: ತವರಲ್ಲೇ ಸಿದ್ದರಾಮಯ್ಯಗೆ ಎಷ್ಟು ಬಾರಿ ಅಪಮಾನ ಮಾಡುತ್ತೀರಿ: ಲಕ್ಷ್ಮಣ್‌ ಪ್ರಶ್ನೆ

08:18 PM Jun 08, 2024 | Team Udayavani |

ಮೈಸೂರು: ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಚುನಾ ವ ಣೆ ಯಲ್ಲಿ ನನ್ನನ್ನು ಸೋಲಿಸಿದ್ದರೂ ನನಗೆ ಬೇಸರವಿಲ್ಲ. ಆದರೆ ಸಿದ್ದರಾಮಯ್ಯ  ಏನು ತಪ್ಪು ಮಾಡಿದ್ದಾರೆ? ತವರು ಜಿಲ್ಲೆಯಲ್ಲೇ ಎಷ್ಟು ಬಾರಿ ಅವರಿಗೆ ಅಪಮಾನ ಮಾಡುತ್ತೀರಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಪ್ರಶ್ನಿಸಿ ಮತದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಬಸವರಾಜ ಬೊಮ್ಮಾಯಿ  ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿನ ಅಭಿವೃದ್ಧಿಗಾಗಿ 5 ರೂ. ಅನುದಾನವನ್ನೂ ನೀಡಲಿಲ್ಲ. ಆದರೆ ಸಿದ್ದರಾಮಯ್ಯ ಸಾಕಷ್ಟು ಕೆಲಸ ಮಾಡಿದ್ದಾರೆ. ಜಯದೇವ ಆಸ್ಪತ್ರೆ ಸಹಿತ ಮೈಸೂರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಿದ್ದರಾಮಯ್ಯ ಅವರಂತಹ ಸ್ವತ್ಛ ವರ್ಚಸ್ಸು ಇರುವ ಸಿಎಂ ದೇಶದಲ್ಲೆಲ್ಲೂ  ಇಲ್ಲ. ಹೀಗಿದ್ದರೂ ಮೈಸೂರಿನ ಜನರು ಸಿದ್ದರಾಮಯ್ಯಗೆ ಯಾಕೆ ನೋವು ಕೊಡುತ್ತೀರಿ ಎಂದು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next