Advertisement

ಮೀನು ಹಿಡಿಯಲು ಹೋಗಿ ಯುವಕ ಸಾವು

12:41 PM Oct 24, 2021 | Team Udayavani |

ದೇವನಹಳ್ಳಿ: ಮೀನಿಹಿಡಿಯಲು ಹೋಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಟ್ಟಕೋಟೆ ಕೆರೆಯಲ್ಲಿ ಘಟನೆ ನಡೆದಿದೆ. ಬಿಹಾರ ಮೂಲದ ನಂದೇಶ್ವರ್‌(30) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿ. ನಾಲ್ವರು ಯುವಕರು ಮೀನು ಹಿಡಿಯಲು ಬಂದಿದ್ದರು. ಅವರಲ್ಲಿ ಓರ್ವ ನೀರಿನಲ್ಲಿ ಮುಳುಗಡೆಯಾಗಿದ್ದಾನೆ.

Advertisement

ಇನ್ನುಳಿದವರು ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಮೃತ ದೇಹದ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಯೊಂದಿಗೆ ಹುಡುಕಾಟ ನಡೆಸಿದರು. ಶುಕ್ರವಾರ ರಾತ್ರಿ ನಡೆದಿರುವಂತಹ ಘಟನೆಯಾಗಿದೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಕೆರೆ ತುಂಬಿ ಕೋಡಿಹೋಗಿದೆ.

ಸತತ ಐದು ಗಂಟೆಗಳ ಕಾರ್ಯಾಚರಣೆಯ ನಂತರ ಮೃತದೇಹವನ್ನು ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿಯಾಗಿದ್ದಾರೆ. ಶುಕ್ರವಾರ ರಾತ್ರಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಮುಳುಗಿದ್ದ ಯುವಕನಾಗಿದ್ದಾನೆ. ರಾತ್ರಿ ಶೋಧಕಾರ್ಯಕ್ಕೆ ಅಡ್ಡಿಯಾದ ಕಾರಣಕ್ಕಾಗಿ ಮುಂಜಾನೆಯಿಂದ ಮೃತದೇಹಕ್ಕಾಗಿ ಶೋಧ ನಡೆಸಿದರು. ಪ್ರತ್ಯೇಕವಾಗಿ ಬೋಟ್ತಯಾರಿಸಿ ಮೀನು ಹಿಡಿಯಲು ಹೋಗಿದ್ದರು. ಯುವಕರು ಕಟ್ಟಡ ಕೆಲಸ ಮಾಡುತ್ತಿದ್ದರು. ಕೂಲಿಗಾಗಿ ಬಂದ ಬಿಹಾರ ಮೂಲದ ವ್ಯಕ್ತಿ ಶವವಾಗಿ ಹೋಗಿದ್ದಾನೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಪೋಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next