Advertisement

ರೈಲಿನಿಂದ ಬಿದ್ದು ಮುಂಡ್ಕೂರಿನ ಯುವಕ ಸಾವು

10:45 AM Dec 06, 2018 | Harsha Rao |

ಬೆಳ್ಮಣ್‌: ಕೊಡೈಕನಾಲ್‌ಪ್ರವಾಸ ಮುಗಿಸಿ ರೈಲಿನಲ್ಲಿ ಮಂಗಳವಾರ ಮುಂಜಾನೆ ವಾಪಸಾಗುತ್ತಿದ್ದ ಯುವಕರ ತಂಡದಲ್ಲಿದ್ದ ಮುಂಡ್ಕೂರಿನ ಶೈಲೇಶ್‌ ರಾವ್‌ (25) ಅವರು ವಡಗರ ರೈಲು ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ.

Advertisement

ದುಬಾೖಯಿಂದ ಇತ್ತೀಚೆಗಷ್ಟೇ ಬಂದಿದ್ದ ಇವರು ತನ್ನ ಕಾಲೇಜಿನ ಮೂವರು ಮಿತ್ರರ ಜತೆ  ಪ್ರವಾಸಕ್ಕೆ ತೆರಳಿದ್ದರು. ವಡಗರ ಸ್ಟೇಷನ್‌ನಲ್ಲಿ ಕುಡಿಯುವ ನೀರಿಗಾಗಿ ಶೈಲೇಶ್‌ ಇಳಿದಿದ್ದ ಅವರು ಚಲಿಸುತ್ತಿದ್ದ ರೈಲಿಗೆ  ಹತ್ತಲು ಪ್ರಯತ್ನಿಸಿ ಆಯತಪ್ಪಿ ರೈಲಿನಡಿಗೆ ಸಿಕ್ಕಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ  ಪೊಲೀಸರು ತಿಳಿಸಿದ್ದಾರೆ.

ಮಿತ್ರರಿಗೆ ಮಂಗಳೂರಲ್ಲೇ ತಿಳಿಯಿತು!
ಶೈಲೇಶ್‌ ಮತ್ತು ಮಿತ್ರರಿದ್ದ ರೈಲು ಮಂಗಳವಾರ ಬೆಳಗ್ಗೆ 7ರ ಹೊತ್ತಿಗೆ ಮಂಗಳೂರು ತಲುಪಿದಾಗಲಷ್ಟೇ ಉಳಿದವರಿಗೆ ಶೈಲೇಶ್‌ ರೈಲಿನಲ್ಲಿರದ ಬಗ್ಗೆ ತಿಳಿಯಿತು. ಕೂಡಲೇ ಆತನ ಮೊಬೈಲಿಗೆ ಕರೆ ಮಾಡಿದಾಗ ವಡಗರ ಸ್ಟೇಷನ್‌ನ ಪೊಲೀಸರು  ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ಮಾಹಿತಿ ನೀಡಿದರು.

ಮುಂಡ್ಕೂರಿನ ಕಂಗುಳಿಯ ಪಾಕ ಶಾಸ್ತ್ರಜ್ಞ ಯೋಗೀಶ್‌ ಭಟ್‌ ಹಾಗೂ ರೇಖಾ ರಾವ್‌ ದಂಪತಿ ಪುತ್ರನಾದ ಶೈಲೇಶ್‌ ಅವರು ನಿಟ್ಟೆ  ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಡಿಪ್ಲೊಮಾ ಪಡೆದು ಮೂರು ವರ್ಷಗಳಿಂದ ದುಬಾೖಯಲ್ಲಿ ಉದ್ಯೋಗದಲ್ಲಿದ್ದರು. 15 ದಿನಗಳ ಹಿಂದೆ ಊರಿಗೆ ಬಂದಿದ್ದ ಅವರು ಎರಡು ವಾರ ಕಳೆದು ವಾಪಸ್‌ ಹೋಗುವವರಿದ್ದರು. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕಿನ ಪರೀಕ್ಷೆಯನ್ನೂ ಬರೆದಿದ್ದರು.
ಬುಧವಾರ ಮುಂಡ್ಕೂರಿನಲ್ಲಿ ಅಂತ್ಯಕ್ರಿಯೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next