Advertisement

Doctor ಹತ್ಯೆ ಮರುದಿನವೇ ಆಸ್ಪತ್ರೆ ಕಟ್ಟಡ ನವೀಕರಣಕ್ಕೆ ಮಾಜಿ ಪ್ರಿನ್ಸಿ ಆದೇಶ!

01:07 AM Sep 06, 2024 | Team Udayavani |

ಕೋಲ್ಕತಾ: ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ನಡೆದ ಕೋಲ್ಕತಾ ಆರ್‌ಜಿ ಕಾರ್‌ ಕಾಲೇಜು- ಆಸ್ಪತ್ರೆಯನ್ನು ಘಟನೆ ನಡೆದ ಮರುದಿನವೇ ನವೀಕರಣಕ್ಕೆ ಒಳಪಡಿಸುವಂತೆ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಫ್ ಘೋಷ್‌ ಆದೇಶಿಸಿದ್ದರು. ಅವರು ಬರೆದಿದ್ದ ಪತ್ರ ಈಗ ವೈರಲ್‌ ಆಗಿದೆ. ಪ್ರಕರಣ ಮುಚ್ಚಿಹಾಕಲು ಘೋಷ್‌ ಯತ್ನಿಸಿದ್ದರು ಎಂಬ ಆರೋಪಗಳಿಗೆ ಪುಷ್ಟಿ ಸಿಕ್ಕಂತಾಗಿದೆ. ವಿರಾಮ ಕೊಠಡಿಗಳು, ಶೌಚಾಲಯಗಳನ್ನು ತುರ್ತಾಗಿ ನವೀಕರಿಸಿ ಕೊಡಿ ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಘೋಷ್‌ ಆ.10ರಂದು ಪತ್ರ ಬರೆದಿದ್ದರು. ಈ ಸಂಬಂಧ ಕಲ್ಕತ್ತಾ ಹೈಕೋರ್ಟ್‌ ಕೂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮತ್ತೂಂದೆಡೆ ಮೃತ ವೈದ್ಯೆಯ ತಂದೆ “ಪೊಲೀಸರೇ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next