Advertisement

ಪತ್ನಿ ಅಗಲಿದ ಮರುದಿನ ಉದ್ಯಮಿ ಜ್ಞಾನದೇವ ಕಾಮತ್‌ ಸಂತೆಕಟ್ಟೆ ನಿಧನ

09:12 PM Sep 10, 2022 | Team Udayavani |

ಹೆಬ್ರಿ: “ಉದಯವಾಣಿ’ ಪತ್ರಿಕೆಯ ಮಾಜಿ ಏಜೆಂಟ್‌, ಹೆಬ್ರಿ ಸಂತೆಕಟ್ಟೆ ನಿವಾಸಿ, ಹಿರಿಯ ಉದ್ಯಮಿ ಜ್ಞಾನದೇವ ಕಾಮತ್‌ ಸಂತೆಕಟ್ಟೆ (80) ಅವರು ಸೆ. 10ರಂದು ನಿಧನ ಹೊಂದಿದರು. ಅವರ ಪತ್ನಿ ಸುಲತಾ ಕಾಮತ್‌ (76) ಅವರು ಸೆ. 9ರಂದು ನಿಧನ ಹೊಂದಿದ್ದರು.

Advertisement

ಮೃತರು ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ವಿವಿಧ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 30 ವರ್ಷಕ್ಕೂ ಮಿಕ್ಕಿ “ಉದಯವಾಣಿ’ ಪತ್ರಿಕೆಯ ವಿತರಕರಾಗಿ, ಸ್ಥಳೀಯ ಶಾಲೆ, ಮೊದಲಾದ ಸಂಘ ಸಂಸ್ಥೆಗಳಿಗೆ ದಾನಿಯಾಗಿದ್ದರು.

ಸಾಹಿತ್ಯದ ಆಸಕ್ತಿ
ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಇದ್ದ ಅವರು ಹಲವಾರು ಕಥೆ, ಕವನಗಳನ್ನು ಬರೆಯುತ್ತಿದ್ದರು. ಪುಸ್ತಕಗಳನ್ನು ಮುದ್ರಿಸಿ ಜನರಿಗೆ ಉಚಿತವಾಗಿ ವಿತರಿಸುತ್ತಿದ್ದರು. ಅವರ ಜೋಮ್ಲ ಕಾಶಿ ಎನ್ನುವ ಲೇಖನವು ಬಹಳ ಪ್ರಸಿದ್ಧಿ ಪಡೆದಿತ್ತು. ಇದು ತರಂಗದ ಅಂದಿನ ಮುಖಪುಟದ ಲೇಖನವಾಗಿ ಹೊರಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next