Advertisement

ಬೈಕ್‌ ಲಾರಿ ಡಿಕ್ಕಿಯಾಗಿ ದಂಪತಿ ಸಾವು

06:26 PM Apr 20, 2019 | Team Udayavani |

ಬೆಂಗಳೂರು: ಹಿಂದಿನಿಂದ ವೇಗವಾಗಿ ಬಂದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪ್ಟ ಘಟನೆ ಹೊಸೂರು ರಸ್ತೆಯಲ್ಲಿ ನಡೆದಿದೆ.

Advertisement

ಆರ್‌.ಟಿನಗರ ಸಿಂಬರಸನ್‌ (29), ಪುಷ್ಪಾ (24) ಮೃತರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್‌ ಸಂಚಾರ ಠಾಣೆ ಪೊಲೀಸರು, ಲಾರಿ ಚಾಲಕನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಮಿಳುನಾಡಿನ ಧರ್ಮಪುರಿಯ ಸಿಂಬರಸನ್‌ ದಂಪತಿ, ಆರ್‌.ಟಿ.ನಗರ ಸಮೀಪದ ಭುವನೇಶ್ವರಿ ನಗರದಲ್ಲಿ ವಾಸವಿದ್ದರು. ಕೆಲ ದಿನಗಳ ಹಿಂದೆ ಧರ್ಮಪುರಿಗೆ ಬೈಕ್‌ನಲ್ಲಿ ತೆರಳಿದ್ದು ಗುರುವಾರ ರಾತ್ರಿ ವಾಪಾಸ್‌ ಬರುವಾಗ,

8.40ರ ಸುಮಾರಿಗೆ ಹೊಸೂರು ರಸ್ತೆಯ ವೀರಸಂದ್ರ ಗೇಟ್‌ ಬಳಿ ಹಿಂಭಾಗದಿಂದ ಬಂದ ಲಾರಿ, ಬೈಕ್‌ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next