Advertisement
ಈ ವಿವಾದ 1990ರಲ್ಲೇ ಬಗೆಹರಿದಿದ್ದರೆ ದೇಶ ಈಗ ಹೇಗೆ ಇರುತ್ತಿತ್ತು? ಎಷ್ಟು ಅಮೂಲ್ಯ ಪ್ರಾಣಗಳನ್ನು ಉಳಿಸಬಹುದಿತ್ತು? ಎರಡು ಸಮುದಾಯಗಳ ನಡುವಿನ ದ್ವೇಷ ಮತ್ತು ಸಂಘರ್ಷ ಎಷ್ಟು ಬೇಗ ಮುಗಿದು ಹೋಗುತ್ತಿತ್ತು?1990ರಲ್ಲೇ ಎರಡೂ ಸಮುದಾಯಗಳಿಗೆ ಸಮ್ಮತವಾಗುವಂಥ ಪರಿಹಾರ ಸೂತ್ರವೊಂದು ತಯಾರಾಗಿತ್ತು. ಆದರೆ ಎಡಪಂಥೀಯ ಇತಿಹಾಸಕಾರರು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನವನ್ನು ವಿಫಲಗೊಳಿಸಿದರು.
Related Articles
ಎಡ ಇತಿಹಾಸಕಾರರು ಸೌಹಾರ್ದ ಪರಿಹಾರವನ್ನು ವಿಫಲ ಗೊಳಿಸಲು ಪ್ರಯತ್ನಿಸಿದ್ದಾರೆ ಎಂಬ ಮುಹಮ್ಮದ್ ಹೇಳಿಕೆಯನ್ನು ಸಮರ್ಥಿಸುವ ಅನೇಕ ದೃಷ್ಟಾಂತಗಳು ಸಿಗುತ್ತವೆ. 2010ರಲ್ಲಿ ಅಲಹಬಾದ್ ಹೈಕೋರ್ಟ್ ವಿವಾದಗ್ರಸ್ತ ಪ್ರದೇಶದ ಮೂರನೇ ಎರಡು ಭಾಗವನ್ನು ಹಿಂದುಗಳಿಗೂ ಮತ್ತು ಮೂರನೇ ಒಂದು ಭಾಗವನ್ನು ಮುಸ್ಲಿಮರಿಗೂ ನೀಡಿ ಸೌಹಾರ್ದಯುತವಾಗಿ ವಿವಾದವನ್ನು ಮುಗಿಸಲು ಮಾಡಿದ ಪ್ರಯತ್ನವನ್ನೂ ಎಡ ಇತಿಹಾಸಕಾರರು ಇದು ವಿವಾದಿತ ನಿವೇಶನವನ್ನು ‘ಮಾರುವ ಪ್ರಯತ್ನ’ ಎಂದು ಟೀಕಿಸಿದ್ದರು.
ರೋಮಿಲಾ ಥಾಪರ್ ಬಹಿರಂಗವಾಗಿಯೇ ಇದು ರಾಜಕೀಯ ತೀರ್ಪು. ಈ ನಿರ್ಧಾರವನ್ನು ಸರಕಾರಗಳು ಬಹಳ ಹಿಂದೆಯೇ ಕೈಗೊಳ್ಳಬಹುದಿತ್ತು ಎಂದು ಟೀಕಿಸಿದ್ದರು. ಮೀನಾಕ್ಷಿ ಜೈನ್ ಎಂಬ ಇತಿಹಾಸ ತಜ್ಞೆ ಬರೆದ ‘ರಾಮ ಮತ್ತು ಅಯೋಧ್ಯೆ’ ಪುಸ್ತಕ ಎಡ ಇತಿಹಾಸಕಾರರ ಸುಳ್ಳುಗಳನ್ನು ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾದ ಅವರ ಪೊಳ್ಳು ವಾದಗಳನ್ನು ಬೆತ್ತಲುಗೊಳಿಸಿದೆ.
Advertisement
ಆರಂಭದಲ್ಲಿ ಎಡ ಇತಿಹಾಸಕಾರರು ವಿವಾದಗ್ರಸ್ತ ಕಟ್ಟಡವನ್ನು (ಬಾಬರಿ ಮಸೀದಿ) ನಿರ್ಮಿಸಿದ ಸ್ಥಳ ಹಿಂದೆ ಯಾವುದೇ ಪೂಜಾ ಸ್ಥಾನವಾಗಿರಲೂ ಇಲ್ಲ, ಹಿಂದುಗಳ ದೇವಸ್ಥಾನವೂ ಆಗಿರಲಿಲ್ಲ ಮತ್ತು ರಾಮ ಅಲ್ಲಿ ಹುಟ್ಟಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ವಾದಿಸುತ್ತಿದ್ದರು. ಆದರೆ ನ್ಯಾಯಾಲಯದ ಆದೇಶದಂತೆ ಪುರಾತತ್ವ ಇಲಾಖೆಯ ಉತVನನ ಕಾರ್ಯ ಮುಂದುವರಿದಾಗ ಅವರ ಧೋರಣೆಯಲ್ಲಿ ‘ಗಮನಾರ್ಹವಾದ ಬದಲಾವಣೆ’ ಗೋಚರಿಸಿತು. ಸುನ್ನಿ ವಕ್ಫ್ ಮಂಡಳಿಯ ಪರವಾಗಿದ್ದ ಕೆಲವು ಇತಿಹಾಸಕಾರರು ‘ಹೊಸ ತರ್ಕ’ವನ್ನು ಮಂಡಿಸಲು ತೊಡಗಿದರು.
ವಿವಾದಗ್ರಸ್ತ ಕಟ್ಟಡದ ಅಡಿಯಲ್ಲಿ ಇರುವುದು ಮುಸ್ಲಿಮರ ಕಟ್ಟಡ ಎನ್ನುವುದು ಅವರ ಹೊಸ ವಾದವಾಗಿತ್ತು. ಉತVನನದಲ್ಲಿ ಒಂದಲ್ಲ ಹಲವು ಹಿಂದು ಮಂದಿರದ ಕಂಬಗಳು ಕಂಡು ಬಂದಾಗ ವಾದ ಮತ್ತೆ ಬದಲಾಯಿತು. ಈಗ ಅಯೋಧ್ಯೆ ಬೌದ್ಧ ಮತ್ತು ಜೈನರ ಶ್ರದ್ಧಾ ಕೇಂದ್ರವಾಯಿತು ಎಂದು ಬರೆದಿದ್ದಾರೆ ಮೀನಾಕ್ಷಿ ಜೈನ್.
ಇದು ತಿಳಿಯಾಗುತ್ತಿರುವ ನೀರನ್ನು ಮತ್ತೆ ಕದಡಿ ರಾಡಿ ಎಬ್ಬಿಸುವಂತೆ ಹಳೆ ವಿವಾದ ಮುಗಿಯದಂತೆ ನೋಡಿಕೊಳ್ಳಲು ಹೊಸ ವಿವಾದಗಳನ್ನು ಸೃಷ್ಟಿಸುವ ಅಪ್ರಾಮಾಣಿಕ ಪ್ರಯತ್ನವಷ್ಟೆ ಆಗಿತ್ತು. ಒಂದೇ ಶಬ್ದದಲ್ಲಿ ಇದನ್ನು ವರ್ಣಿಸುವುದಾದರೆ ಅದು ಕುತಂತ್ರ. ಮುಸ್ಲಿಮರ ವಾದವನ್ನು ಸಮರ್ಥಿಸುವ ಎಡಪಂಥೀ ಯರ ಹುನ್ನಾರದ ಹಿಂದೆ ಇದ್ದದ್ದು ಮುಸ್ಲಿಮರ ಪರವಾದ ಪ್ರಾಮಾ ಣಿಕ ಕಾಳಜಿಯಲ್ಲ ಬದಲಾಗಿ ಕುಟಿಲ ರಾಜಕೀಯ ಕುತಂತ್ರ ಮಾತ್ರ.ದೇಶದಲ್ಲಿ ಮತೀಯ ಹಿಂಸಾಚಾರ ಭುಗಿಲೇಳಬೇಕೆನ್ನುವುದು ಎಡ ಚಿಂತಕರ ಮನದಾಳದ ಬಯಕೆಯಾಗಿತ್ತು ಎನ್ನುವುದು ಮುಹಮ್ಮದ್ ಅವರ ಆತ್ಮಕತೆಯಿಂದಲೇ ಸ್ಪಷ್ಟವಾಗುತ್ತದೆ. ಎಡ ಇತಿಹಾಸಕಾರರಲ್ಲಿ ನಾಚಿಕೆಯ ಲವಲೇಷವೇನಾದರೂ ಇದ್ದರೆ ತಮ್ಮ ಹಿಂದಿನ ಸುಳ್ಳುಗಳಿಗೆ ಮತ್ತು ಅಪ್ರಾಮಾಣಿಕತೆಗೆ ಅವರು ದೇಶದ ಕ್ಷಮೆ ಕೇಳಬೇಕು. ಸುಳ್ಳು ಇತಿಹಾಸವನ್ನು ಬರೆದರೆ ಅಥವಾ ಅಸಮರ್ಥನೀಯ ವಿಚಾರವನ್ನು ಸಮರ್ಥಿಸಿದರೆ ಹೊಸ ಇತಿಹಾಸ ಸೃಷ್ಟಿಸಿದಂತಾಗುವುದಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ವರ್ಗೀಯ ಸಂಘರ್ಷದಲ್ಲಿ ಸುಳ್ಳು ಮತ್ತು ಅಪ್ರಾಮಾ ಣಿಕತೆಯೂ ಸರಿ ಎಂದು ನಂಬುವವರಿಂದ ಇದನ್ನೆಲ್ಲ ನಿರೀಕ್ಷಿಸಲು ಸಾಧ್ಯವಿಲ್ಲ. ಸುಳ್ಳನ್ನು ಸತ್ಯ ಎಂದು ಪ್ರತಿಪಾದಿಸುವುದು ಹೇಗೆ ಎನ್ನುವುದನ್ನು ಕೆ ಮಾರ್ಕ್ಸ್ ಬರೆದ ಅವರ ಪವಿತ್ರ ಗ್ರಂಥದಲ್ಲೇ ವಿವರಿಸಲಾಗಿದೆ. ಲೇಖನ ಕೃಪೆ : ಸ್ವರಾಜ್ಯ