Advertisement

ಅತ್ಯಂತ ಕೆಟ್ಟ ಆಡಳಿತ ನಡೆಸಿದ್ದರಿಂದ ಕಾಂಗ್ರೆಸ್ ಗೆ ಈ ಸ್ಥಿತಿ: ಕಾರಜೋಳ ಲೇವಡಿ

11:47 AM Mar 12, 2022 | Team Udayavani |

ಬೆಳಗಾವಿ: ನಮ್ಮದು ಶತಮಾನದ ಇತಿಹಾಸ ಹೊಂದಿರುವ ಮತ್ತು ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಎರಡು ಸ್ಥಾನ ಗೆಲ್ಲುತ್ತದೆ ಎಂದರೆ ಅದರ ನಾಯಕರಿಗೆ ನಾಚಿಕೆಯಾಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದರು.

Advertisement

ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ೬೦ ವರ್ಷಗಳ ಕಾಲ ಕಾಂಗ್ರೆಸ್ ಅತ್ಯಂತ ಕೆಟ್ಟದಾಗಿ ಆಡಳಿತ ನಡೆಸಿದ್ದರಿಂದ ಇಂದು ಅದಕ್ಕೆ ಈ ಕೆಟ್ಟ ಸ್ಥಿತಿ ಬಂದಿದೆ ಎಂದರು. ಕಾಂಗ್ರೆಸ್ ಈಗ ಮುಳುಗುವ ಹಡಗಲ್ಲ. ಇನ್ನು ಸ್ವಲ್ಪವೇ ದಿನದಲ್ಲಿ ಅದು ಮೋಡಕಾ ಬಜಾರ್ ಗೆ ಬಂದು ಬೀಳುತ್ತದೆ. ಅಲ್ಲಿಯೂ ಅದನ್ನು ಯಾರೂ ನೋಡುವುದಿಲ್ಲ ಎಂದು ಲೇವಡಿ ಮಾಡಿದರು.

ಒಂದು ಪಕ್ಷ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವುದು ಸಾಮಾನ್ಯದ ಮಾತಲ್ಲ. ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ, ಗೋವಾದಲ್ಲಿ ಮೂರನೇ ಸಲ ಅಧಿಕಾರಕ್ಕೆ ಬಂದಿದೆ ಎಂದರೆ ಅಲ್ಲಿನ ಜನ ಬಿಜೆಪಿ ಆಡಳಿತ ಹಾಗೂ ಕಾರ್ಯಕ್ರಮ ಮೆಚ್ಚಿದ್ದಾರೆ ಎಂದರ್ಥ. ಕರ್ನಾಟಕದಲ್ಲಿ’ಸಹ ಇದೇ ಇತಿಹಾಸ ನಿರ್ಮಾಣವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next