Advertisement
‘ಸಮ್ಮಿಶ್ರ ಸರಕಾರ ಹೆಚ್ಚು ಸಮಯ ಬಾಳುವುದಿಲ್ಲ; ಮೋದಿ ಅವರ ಸರಕಾರ ಮಾತ್ರ ಉಳಿಯುತ್ತದೆ’ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇತ್ತೀಚಿನ ಸಮೀಕ್ಷೆಯೊಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ; ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟಕ್ಕೆ 25ರಿಂದ 27 ಸೀಟುಗಳು ಸಿಗಲಿವೆ ಎಂದು ತಿಳಿಸಿದ್ದರಿಂದ ಹೇಗಾದರೂ ಮಾಡಿ ರಾಜ್ಯದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೆ ಲೋಕ ಸಭಾ ಸ್ಥಾನಗಳನ್ನು ಗೆಲ್ಲಲು ಸುಲಭ ಎಂಬ ಭಾವನೆ ಅವರದ್ದು ಎಂದರು.
‘ಬೇಟಿ ಪಡಾವೊ ಬೇಟಿ ಬಚಾವೊ’ ಯೋಜನೆಗೆ ಕೇಂದ್ರ ಸರಕಾರ ಕಾದಿರಿಸಿದ ಹಣದಲ್ಲಿ ಶೇ. 55ರಷ್ಟನ್ನು ಪ್ರಚಾರಕ್ಕೇ ವಿನಿಯೋಗಿಸಲಾಗಿದೆ; ಕೇವಲ ಶೇ. 23 ಮಾತ್ರ ಯೋಜನೆಗೆ ಲಭಿಸುತ್ತದೆ. ದೇಶದ ಸಾಲದ ಮೊತ್ತ ಯುಪಿಎ ಸರಕಾರ ಇದ್ದಾಗ 54 ಲಕ್ಷ ಕೋಟಿ ರೂ. ಇದ್ದರೆ, ಈಗ ಅದು 82 ಲಕ್ಷ ಕೋಟಿ ರೂ.ಗಳಿಗೇರಿದೆ. ಎನ್ಡಿಎ ಸರಕಾರದ ನಾಲ್ಕುವರೆ ವರ್ಷ ಅವಧಿಯಲ್ಲಿ 28 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ ಎಂದು ಐವನ್ ಆಪಾದಿಸಿದರು.
Related Articles
ತನ್ನ ಸಾಧನೆ ಬಗ್ಗೆ ಹೇಳುವ ಸಂಸದ ನಳಿನ್ ಕುಮಾರ್ ಕಟೀಲು, ಕೇಂದ್ರದಿಂದ ಅಧಿಕೃತವಾಗಿ ಲಭ್ಯವಿರುವ ಅನುದಾನದ ಹೊರತಾಗಿ ಹೆಚ್ಚುವರಿಯಾಗಿ ಎಷ್ಟು ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತರಿಸಿದ್ದಾರೆ ಎನ್ನುವ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಐವನ್ ತಿಳಿಸಿದರು. ಕಾಂಗ್ರೆಸ್ ಪಕ್ಷ ಅವಕಾಶ ನೀಡಿದರೆ ತಾನು ನಳಿನ್ ಕುಮಾರ್ ಕಟೀಲು ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದರು.
Advertisement
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಯು.ಎಚ್. ಖಾಲಿದ್, ಮುಸ್ತಾಫಾ, ಸಿರಾಜ್, ನಝೀರ್ ಬಜಾಲ್, ಪಿಯುಸ್ ಮೊಂತೇರೊ ಪತ್ರಿಕಾಗೋಷ್ಠಿಯಲ್ಲಿದ್ದರು.