Advertisement
ಕಲ್ಲಿದ್ದಲು ದಾಸ್ತಾನು ಭಾರಿ ಪ್ರಮಾಣದಲ್ಲಿ ಕುಸಿದಿರುವ ಸಂಗತಿ ಬಯಲಾಗುತ್ತಿದ್ದಂತೆ ಲೋಡ್ ಶೆಡ್ಡಿಂಗ್ ಭೀತಿ ಎದುರಾಗಿತ್ತು. ಪರಿಸ್ಥಿತಿಯ ಲಾಭ ಪಡೆದು ವಿದ್ಯುತ್ ಖರೀದಿ ಪ್ರಯತ್ನನಡೆಸುವ ಸಾಧ್ಯತೆ ಬಗ್ಗೆ ಗುಸುಗುಸು ಕೇಳಿಬಂದಿತ್ತು.
Related Articles
ಸೌರ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಹಾಗೂ ಜಲ ವಿದ್ಯುತ್ ಮೂಲದಿಂದ ಕೊರತೆ ನೀಗಿಸಲಾಗುತ್ತಿದೆ . ಕಲ್ಲಿದ್ದಲು ಕೊರತೆ ನೀರಿಸಲು 5 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜನವರಿಯಲ್ಲಿ ವಿದೇಶದಿಂದ ಕಲ್ಲಿದ್ದಲು ಬರುತ್ತದೆ. ಕಲ್ಲಿದ್ದಲು ಸಮಸ್ಯೆಯಿಂದ ರಾಯಚೂರಿನ ಘಟಕಗಳ ನಿರ್ವಹಣೆಗೆ ತೊಂದರೆಯಾಗಿದೆ. ನಾನು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದಿಲ್ಲ. ತಿತ್ಲಿ ಚಂಡ ಮಾರುತದಿಂದ ಮಹಾನದಿಯಿಂದ ಕಲ್ಲಿದ್ದಲು ಸರಬರಾಜು ಆಗುತ್ತಿಲ್ಲ ಎಂದು ತಿಳಿಸಿದರು.
Advertisement
ಸೌರ, ಪವನ, ಜಲ ವಿದ್ಯುತ್ ಉತ್ಪಾದನೆ ಮೂಲಕ ಎಷ್ಟು ವಿದ್ಯುತ್ ಬರುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸಂಜೆ 5 ರಿಂದ ರಾತ್ರಿ 10 ರವರೆಗೆ 300 ಮೆಗಾವ್ಯಾಟ್ ವಿದ್ಯುತ್ ಸಮಸ್ಯೆಯಾಗಿದೆ. ಜಲ ವಿದ್ಯುತ್ ಉತ್ಪಾದನೆಗೆ ಇನ್ನೂ ಜಲಾಶಯಗಳಲ್ಲಿ ನೀರು ಇದೆ. ಹೀಗಾಗಿ, ಸಮಸ್ಯೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಲ್ಲಿದ್ದಲು ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇನೆ. ಮತ್ತೂಮ್ಮೆ ಪತ್ರ ಬರೆಯಲಾಗುವುದು. ಕಲ್ಲಿದ್ದಲು ಸಾಗಾಣಿಕೆ ಸಕಾಲದಲ್ಲಿ ಆಗುವುದನ್ನು ಖಾತರಿಪಡಿಸಲು ಕಲ್ಲಿದ್ದಲು ಸಚಿವಾಲಯ, ಕೇಂದ್ರ ರೈಲ್ವೆ ಕಚೇರಿಗೆ ಕೆಪಿಸಿಎಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ನಮಗೆ ರೈಲಿನ ಮೂಲಕ ಸರಬರಾಜು ಮಾಡಲು ರೇಕ್ಗಳ ಕೊರತೆ ಇದೆ. ಅದನ್ನು ಒದಗಿಸಲು ಕೇಂದ್ರ ಒಪ್ಪಿದೆ ಎಂದರು.
ಮಹಾನಗರಗಳಲ್ಲಿ ಮತ್ತು ಕೈಗಾರಿಕೆಗಳಿಗೆ 24 ಗಂಟೆ ನಿರಂತರ ವಿದ್ಯುತ್, ನಿರಂತರ ಜ್ಯೋತಿಯಲ್ಲಿ 22 ರಿಂದ 24 ಗಂಟೆ ವಿದ್ಯುತ್ ಪೂರೈಕೆ, ಗ್ರಾಮೀಣ ಪ್ರದೇಶದಲ್ಲಿ 7 ಗಂಟೆ 3 ಫೇಸ್, ಒನ್ ಫೇಸ್ 9 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
9000 ಟನ್ ಪೂರೈಕೆಕಲ್ಲಿದ್ದಲು ಕಾರಣಕ್ಕೆ ಲೋಡ್ ಶೆಡ್ಡಿಂಗ್ ಶುರುವಾಗಲಿದೆ ಎಂದೇ ಚರ್ಚೆಯಾಗುತ್ತಿತ್ತು. ಆದರೆ ಸದ್ಯದಲ್ಲೇ ಕಲ್ಲಿದ್ದಲು ಪೂರೈಕೆ ಹೆಚ್ಚಾಗಲಿದ್ದು, ಹಾಲಿ ಪೂರೈಕೆಯಾಗುತ್ತಿರುವ ಕಲ್ಲಿದ್ದಲು ಪ್ರಮಾಣದ ಜತೆಗೆ ಹೆಚ್ಚುವರಿಯಾಗಿ ಸುಮಾರು 9000 ಟನ್ ನಿತ್ಯ ಪೂರೈಕೆಯಾಗಲಿದ್ದು, ಲೋಡ್ ಶೆಡ್ಡಿಂಗ್ ಅಗತ್ಯವೇ ಬೀಳುವುದಿಲ್ಲ ಎಂಬುದಾಗಿ ‘ ಉದಯವಾಣಿ’ ಮೊದಲೇ ಪ್ರಕಟಿಸಿತ್ತು. ಯಾವ ಗಣಿ ಸಂಸ್ಥೆಗಳಿಂದ ಎಷ್ಟು ಪ್ರಮಾಣದಲ್ಲಿ ಹೆಚುÌವರಿ ಕಲ್ಲಿದ್ದಲು ಪೂರೈಕೆ ಸಾಧ್ಯತೆ ಇದೆ ಎಂಬ ಬಗ್ಗೆಯೂ ಅಂಕಿಸಂಖ್ಯೆ ಸಮೇತ ಪ್ರಕಟಿಸಿತ್ತು. ನಿತ್ಯ ಸಂಜೆ 6ರಿಂದ 10ರವರೆಗಿನ ಬೇಡಿಕೆ ನಿಭಾಯಿಸಲು ಇಲಾಖೆ ಹರಸಾಹಸ ನಡೆಸುತ್ತಿರುವುದನ್ನು ಉಲ್ಲೇಖೀಸಿತ್ತು. ದೆಹಲಿಯಲ್ಲಿ ನಾಳೆ ಸಭೆ
ಕೇಂದ್ರ ಕಲ್ಲಿದ್ದಲು ಸಚಿವಾಲಯವು ಶುಕ್ರವಾರ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ಕರೆದಿದ್ದು, ಕಲ್ಲಿದ್ದಲು ಪೂರೈಕೆ ಸಂಬಂಧ ರಾಜ್ಯಕ್ಕೆ ಮಹತ್ವವೇನಿಸಿದೆ. ಸಭೆಯಲ್ಲಿ ಕೇಂದ್ರದ ಎಲ್ಲ ಕಲ್ಲಿದ್ದಲು ಗಣಿ ಕಂಪೆನಿಗಳು, ರಾಜ್ಯಗಳ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ದೇಶದಾದ್ಯಂತ ಒಟ್ಟು ಬೇಡಿಕೆ ಹಾಗೂ ಪೂರೈಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಾಧ್ಯತೆಯಿದೆ. ರಾಜ್ಯದ ಪ್ರತಿನಿಧಿಯಾಗಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ರಾಜ್ಯಕ್ಕೆ ಕಲ್ಲಿದ್ದಲು ಗಣಿ ಕಂಪೆನಿಗಳು ಪೂರೈಕೆ ಮಾಡಬೇಕಿರುವ ಕಲ್ಲಿದ್ದಲು ಪ್ರಮಾಣ ಹಾಗೂ ವಾಸ್ತವ ಪೂರೈಕೆ ಬಗ್ಗೆಯೂ ಗಮನ ಸೆಳೆಯುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿರುವ ಸಂದರ್ಭದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸ್ಪಂದನೆ ವ್ಯಕ್ತವಾದರೆ, ಕಲ್ಲಿದ್ದಲು ಪೂರೈಕೆ ಸ್ಥಿತಿಗತಿ ಸುಧಾರಿಸುವ ನಿರೀಕ್ಷೆಯಿದೆ. ಸಿಎಂ ಗರಂ
ಲೋಡ್ಶೆಡ್ಡಿಂಗ್ ಹಾಗೂ ಕೃತಕ ಅಭಾವ ಕುರಿತು ವರದಿಗಳ ಬಗ್ಗೆ ಮಾಧ್ಯಮಗಳ ಮೇಲೆ ಗರಂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ದೀಪಾವಳಿಗೆ ಲೋಡ್ಶೆಡ್ಡಿಂಗ್ ಎಂದು ಸುದ್ದಿ ಮಾಡಿದ್ದೀರಿ. ಯಾರನ್ನೂ ಕತ್ತಲೆಗೆ ತಳ್ಳಲು ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿಲ್ಲ. ನಮ್ಮ ವಿದ್ಯುತ್ ಕಂಪನಿಗಳು ಲೋಡ್ ಶೆಡ್ಡಿಂಗ್ ಮಾಡಿಲ್ಲ. ಸರ್ಕಾರದಿಂದಲೂ ಯಾವುದೇ ತೀರ್ಮಾನ ಆಗಿಲ್ಲ. ನಾನು ಮುಖ್ಯಮಂತ್ರಿಯಾಗಿ ಸಹಿ ಮಾಡದೆ ಲೋಡ್ಶೆಡ್ಡಿಂಗ್ ಹೇಗೆ ಮಾಡುತ್ತಾರೆ. ನೀವು ಮಾಡಿರುವ ಡ್ಯಾಮೇಜ್ನಿಂದ ಎಷ್ಟು ಹಾನಿಯಾಗುತ್ತಿದೆ ಗೊತ್ತಿದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.