Advertisement

ಮುಖ್ಯಮಂತ್ರಿ ಮುಂದಿದೆ ಚುನಾವಣೆ ಸವಾಲು

10:10 PM Aug 02, 2021 | Team Udayavani |

ಬೆಂಗಳೂರು: ಮುಖ್ಯ ಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ವರ್ಷಾಂತ್ಯದಲ್ಲಿ ಸಾಲು ಸಾಲು ಚುನಾವಣೆಗಳನ್ನು ಎದುರಿ ಸುವ ಸವಾಲು ಹೊತ್ತುಕೊಂಡಿದ್ದು, ಇದು ಅವರ ಪಾಲಿಗೊಂದು ದೊಡ್ಡ ಅಗ್ನಿಪರೀಕ್ಷೆಯಾಗಲಿದೆ.

Advertisement

ಮಾಜಿ ಸಿಎಂ ಯಡಿಯೂರಪ್ಪ  ಸೂಚನೆ ಮೇರೆಗೆ ಮುಖ್ಯಮಂತ್ರಿ ಯಾಗಿದ್ದರೂ, ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ ಎದುರಾಗುವ ಚುನಾವಣೆಗಳಲ್ಲಿ ಬಸವರಾಜ್‌ ಬೊಮ್ಮಾಯಿಗೆ ತಮ್ಮ ಸಾಮರ್ಥ್ಯ ವನ್ನು ತೋರಿಸುವ ಸವಾಲು ಮತ್ತು ಅವಕಾಶ ಎರಡೂ ಒದಗಿ ಬರಲಿದೆ.

ಸಾಲು ಸಾಲು ಚುನಾವಣೆಗಳು:

ಈ ವರ್ಷಾಂತ್ಯದಲ್ಲಿ ಕೆಲವು ಚುನಾವಣೆಗಳು ಎದುರಾಗಲಿವೆ. ಪ್ರಮುಖವಾಗಿ ಹಾನಗಲ್‌ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳು ನಡೆಯ ಲಿವೆ. ಎರಡೂ ಉಪ ಚುನಾವಣೆಗಳು ಉತ್ತರ ಕರ್ನಾಟಕ ಭಾಗದ ಲ್ಲಿಯೇ ನಡೆಯುವುದರಿಂದ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರಗಳಾಗಿರುವುದರಿಂದ ಅಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವುದು ಸಿಎಂಗೆ ಅನಿವಾರ್ಯವಾಗಲಿದೆ.

ಹಾನಗಲ್‌ ಸಿಎಂ ತವರು ಜಿಲ್ಲೆಯ ಕ್ಷೇತ್ರವೇ ಆಗಿರುವುದು ಹಾಗೂ ಬಿಜೆಪಿಯ ಸಿ.ಎಂ. ಉದಾಸಿಯವರೇ ಪ್ರತಿನಿಧಿಸಿದ್ದ ಕ್ಷೇತ್ರವಾಗಿ ರುವುದರಿಂದ ಪಕ್ಷದಿಂದ ಯಾರನ್ನೇ ಕಣಕ್ಕಿಳಿಸಿದರೂ ಗೆಲ್ಲಿಸಿಕೊಂಡು ಬರುವ  ಜವಾಬ್ದಾರಿ ಮುಖ್ಯಮಂತ್ರಿ ಮೇಲೆ ಬೀಳಲಿದೆ.

Advertisement

ಜಿ.ಪಂ. ಚುನಾವಣೆ:

ಈಗಾಗಲೇ ಅವಧಿ ಮುಗಿದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಿಗೆ  ಡಿಸೆಂಬರ್‌ ವೇಳೆಗೆ ಚುನಾವಣೆ ನಡೆಯ ಲಿದೆ. ಇದು ಮಿನಿ ವಿಧಾನಸಭಾ ಚುನಾವಣೆ ಎಂದೇ ಪರಿಗಣಿತ ವಾಗುವುದರಿಂದ ಇದರ  ಫ‌ಲಿ ತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಗ್ರಾಮೀಣ ಭಾಗದ ಮತದಾರರ ನಾಡಿ ಮಿಡಿತವನ್ನು ಬಿಂಬಿಸುವ ಈ  ಚುನಾವಣೆಗಳು ಬೊಮ್ಮಾಯಿಗೆ ಸವಾಲಾಗಲಿದೆ.

ಬಿಬಿಎಂಪಿ, ಪಾಲಿಕೆ ಚುನಾವಣೆ:

ಜತೆಗೆ ಬಿಬಿಎಂಪಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಹಿತ ಅನೇಕ ಮಹಾನಗರ ಪಾಲಿಕೆಗಳ ಚುನಾವಣೆಗಳೂ ಎದುರಾಗಲಿವೆ. ನಗರ ಪ್ರದೇಶದಲ್ಲಿ ತನ್ನ ಶಕ್ತಿಯನ್ನು ಒರೆಗೆ ಹಚ್ಚಲು ಬಿಜೆಪಿ ಗಿರುವ ದೊಡ್ಡ ಅವಕಾಶವೇ ಬಿಬಿಎಂಪಿ ಚುನಾವಣೆ. ಬಿಬಿಎಂಪಿಯನ್ನು ಗೆಲ್ಲಲು ಅಲ್ಲಿನ ಶಾಸಕರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬುದೂ ಮುಖ್ಯವಾಗುತ್ತದೆ.

ಸಿಎಂ ತವರು ಜಿಲ್ಲೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯೂ ವರ್ಷಾಂತ್ಯಕ್ಕೆ ನಡೆಯಲಿದೆ. ಜತೆಗೆ ಕಲಬುರಗಿ ಮಹಾನಗರ ಪಾಲಿಕೆ ಹಾಗೂ 100ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಸಿಎಂ ಸಾಮರ್ಥ್ಯವನ್ನು ಪರೀಕ್ಷಿಸಲಿವೆ.

25 ಪರಿಷತ್‌ ಸ್ಥಾನಗಳು :

ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ 25 ಸದಸ್ಯರ ಅವಧಿ 2022ರ ಜನವರಿಗೆ ಅಂತ್ಯವಾಗಲಿದ್ದು, ಇದಕ್ಕೂ  ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿವೆ. ಮೇಲ್ಮನೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಬಹುಮತ ಪಡೆಯಲು ಈ ಚುನಾವಣೆ ಹೆಚ್ಚು ಮಹತ್ವದ್ದಾಗಿದೆ. 2022ರ ಜುಲೈಗೆ ಸಭಾಪತಿ ಬಸವರಾಜ್‌ ಹೊರಟ್ಟಿ  ಅವಧಿ ಪೂರ್ಣಗೊಳ್ಳುವುದರಿಂದ ಬಿಜೆಪಿ  ಬಹುಮತ ಪಡೆದರೆ ತಮ್ಮದೇ ಸಭಾಪತಿಯನ್ನು ಹೊಂದಲು ಅವಕಾಶ ಸಿಗಲಿದೆ. ಹೀಗಾಗಿ ಈ ಚುನಾ ವಣೆಯಲ್ಲಿ ಹೆಚ್ಚು ಸದಸ್ಯರನ್ನು ಗೆಲ್ಲಿಸುವ ಸವಾಲು ಸಿಎಂ ಮುಂದಿದೆ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next