Advertisement

ಚಿದಂಬರಂ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ: ಎಚ್‌.ಡಿ.ದೇವೇಗೌಡ

10:39 AM Aug 23, 2019 | Team Udayavani |

ಬೆಂಗಳೂರು: ಚಿದಂಬರಂ ವಿರುದ್ಧದ ಪ್ರಕರಣ ಬಹಳ ಹಿಂದಿನದು, ಯಾಕೆ ಈ ಹಂತಕ್ಕೆ ಹೋಯಿತೋ ಗೊತ್ತಿಲ್ಲ. ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಚಿದಂಬರಂ ತನಿಖಾಧಿಕಾರಿಗಳಿಗೆ ಸಹಕಾರ ಕೊಟ್ಟರೋ ಇಲ್ಲವೋ, ಯಾಕೆ ಬಂಧನ ಮಾಡಿದರೋ, ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ನೋಡಬೇಕು ಎಂದು ಹೇಳಿದರು. ಹಿಂದೆ ಚಿದಂಬರಂ ಅವರು ಕೇಂದ್ರದಲ್ಲಿ ಗೃಹ ಸಚಿವರಾಗಿದ್ದಾಗ ಅಮಿತ್‌ ಷಾ ಬಂಧನ ಮಾಡಿದ್ದಕ್ಕೆ ಇಂದು ಚಿದಂಬರಂ ಅವರನ್ನು ಬಂಧಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಅದರ ಬಗ್ಗೆ ನನಗೇನೂ ಮಾಹಿತಿ ಇಲ್ಲ ಎಂದರು.

ಇನ್ನು, ಮಾಜಿ ಸಚಿವ ಉಮೇಶ್‌ ಕತ್ತಿ ಎಚ್‌.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರಾ ಎಂಬ ಪ್ರಶ್ನೆಗೆ, ಸಿಡಿಮಿಡಿಗೊಂಡ ಗೌಡರು, ನಮ್ಮದು ಚಿಕ್ಕ ಪಕ್ಷ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಅದಕ್ಕೆಲ್ಲಾ ನಾನು ಉತ್ತರ ಕೊಡಲ್ಲ ಎಂದರು. ರಾಜ್ಯ ರಾಜಕಾರಣದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಾವು ಒಂದು ಮಾತನಾಡಿದರೆ ಮತ್ತೂಂದು ರೀತಿ ಬಿಂಬಿತವಾಗುತ್ತದೆ. ಹೀಗಾಗಿ, ನಾನಾಯಿತು, ನನ್ನ ಪಕ್ಷ ಸಂಘಟನೆಯಾಯಿತು ಎಂಬಂತೆ ಇದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next